ಶನಿವಾರ, ಏಪ್ರಿಲ್ 4, 2015

ನುಡಿ ನಮನ

ಅಭಿನವ ಸರ್ವಜ್ಞನಿಗೊಂದು ನುಡಿ ನಮನ''
(ಕವಿ ಡಾ. ಆರ್ ಸಿ ಮುದ್ದೇಬಿಹಾಳ ಅವರ ಕುರಿತು)  
-ಮಲ್ಲಿಕಾರ್ಜುನ ಬೃಂಗಿಮಠ,ವಿಜಯಪುರ
ಕನ್ನಡಕ್ಕೆ ಮೂರು ಮಹಾಕಾವ್ಯ ನೀಡಿದೆ
35 ಸಾವಿರಕ್ಕೂ ಹೆಚ್ಚು ತ್ರಿಪದಿ ಬರೆದೆ
50ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದೆ
ಇನ್ನು 50ತ್ತು ಪುಸ್ತಕ ಬರೆದಿಟ್ಟು [ಅಪ್ರಕಟಿತ] ಶಿವನಪಾದ ಸೇರಿದೆ
ಸಿಂಧೂರ ಲಕ್ಷ್ಮಣ, ಬಸವಣ್ಣನ ಮಾಹಾಕಾವ್ಯಲೋಕಾರ್ಪಣೆಮಾಡಿದೆ
ಜಗದ ಕೆಟ್ಟ ನೀತಿ ನಿಯಮಗಳಿಗೆ ಕಾವ್ಯ ಖಡ್ಗದಿ ತೀಡಿದೆ
ನೂರಾರು ಊರುಗಳು ತಪ್ಪದೇ ತಿರುಗಿದೆ
ಪರಿಶುದ್ಧ ಭಾವದಿ ಸಾಹಿತ್ಯ ನಮಗೆ ನೀಡಿದೆ
ಪ್ರಚಾರ ಪಡೆಯದೇ, ಪ್ರಶಸ್ತಿಗೆ ರಾಜಕೀಯ ಜನರ ಬಾಲಗೋಚಿಯಾಗದೆ
ದಿಗ್ಗಜನಾಗಿ ನಡೆ ನುಡಿಯಿಂದ ಪ್ರಮಾಣಿಕ ನಿಷ್ಠುರನಾಗಿ ನಡೆದೆ
ತಪ್ಪು ಮಾಡಿದವು ಸಾಹಿತ್ಯ ಪರಿಷತ್ತುಗಳು ನಿಮ್ಮನ್ನು ಅಧ್ಯಕ್ಷನನ್ನಾಗಸದೇ
ನಿರ್ಲಕ್ಷ್ಯಮಾಡಿದರೂ ಛಲಬಿಡದೆ ಸಾಹಿತ್ಯ ಬರೆದೆ
ಅಭಿಮಾನಿಗಳಿಗೆ ಉತ್ತಮ ಸಾಹಿತ್ಯ ಪುಸ್ತಕ ನೀಡಿದೆ.
ಆಯುರ್ವೇದ ಗ್ರಂಥಗಳನ್ನು ಬರೆದೆ
2004 ರ ನವೆಂಬರ 22 ರಂದು ಭೃಂಗಿಮಠ ವೇದಿಕೆಯಿಂದ ಸನ್ಮಾನಗೊಂಡೆ
ಕನ್ನಡದಲ್ಲೇ ಅತಿ ಹೆಚ್ಚ ಪುಸ್ತಕ ಬರೆದೆ
ಕನ್ನಡ, ಹಿಂದಿ, ಇಂಗ್ಲೀಷ, ಸಂಸ್ಕ್ರತ,ಉರ್ದು, ಮರಾಟಿ ಭಾಷೆ ಪಂಡಿತನೆನಸಿದೆ
ಆಯುರ್ವೇದ ಯುನಾನಿ ಬಾರತೀಯ ಸಂಸ್ಕ್ಋತಿಯ ವ್ಯದ್ಯ ಪದ್ದತಿ ಕನ್ನಡಕ್ಕೆ ಬರೆದೆ
ನಿಮ್ಮ ನಿರ್ಲಕ್ಷಿಸಿ ಕನ್ನಡ ಸಾ ಪರಿಷತ್ತುಗಳು ಮೋಸ ಮಾಡಿವೆ
ಈ ರೀತಿಯಾದದ್ದಕ್ಕೆ ನಮ್ಮಲ್ಲೂ ಬೇಸರವಿದೆ
ನಿಮ್ಮಗೆ ನ್ಯಾಯ ಕೊಡಿಸಲು ನಾನು ಬಡೆದಾಡಿದೆ ಹಲವು ಸಂಘಸಂಸ್ಥೆಗಳಿಗೆ ನಿಮ್ಮ ಸನ್ಮಾನಿಸಲು ಕೋರಿದೆ
ನಿಮ್ಮ ಘಟ್ಟಿತನ ನನ್ನ ಮನ ಸ್ಪಂದಿಸಿದೆ ನಿಮ್ಮ ನಿಷ್ಟುರತೆಯನಗೆ ಹಿಡಿಸಿದೆ
ನಿಜವಾಗಿಯೂ ಕನ್ನಡ ಸಾಹಿತ್ಯ ವಲಯ ನಿಮ್ಮನ್ನು ನಿರ್ಲಕ್ಷಿಸಿ ಮೋಸಿಸಿದೆ
ನಿಮ್ಮಾತ್ಮಕ್ಕೆ ಶಾಂತಿ ದೊರೆಯಬೇಕಾದರೆ ನಿಮ್ಮ ಸಮಗ್ರ ಸಾಹಿತ್ಯ ಪ್ರಕಟಿಸಲು ಸಾಹಿತ್ಯ ಪರಿಷತ್ತುಗಳಿಗೆ ನನ್ನ ಮನ ಆಗ್ರಹಿಸಿದೆ
ಇದೋ ಡಾ; ಆರ್ ಸಿ ಮುದ್ದೇಬಿಹಾಳ ದಿಗ್ಗಜ ಆತ್ಮವೇ ನಿನ್ನ ನೆನೆದು ನಾ ಈ ನುಡಿ ಅರ್ಪಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ