|
ಗುರುವಾರ, ಮೇ 30, 2013
ಕವಿತೆ : ಡಾ. ಶಿವಾನಂದ ಕುಬಸದ
ಶನಿವಾರ, ಮೇ 25, 2013
ಕಥೆ : ಸೂರ್ಯ ಚಂದ್ರರು ಕಾವಲೋ..-ಡಾ.ಪ್ರಕಾಶ ಗ.ಖಾಡೆ
¸ÀÆAiÀÄð ZÀAzÀægÀÄ PÁªÀ¯ÉÆÃ........
qÁ.
¥ÀæPÁ±À UÀ. SÁqÉ
HgÀ PÁªÀ°UÉ ¤AvÀ PÀj,
©½, PÉA¥ÀÄ ªÉÆzÀ¯ÁzÀ ºÀAqÀ§AqÀ §tÚzÀ £Á¬ÄUÀ¼ÀÄ Erà ºÀ½îUÉ F ¹Ãd¤ß£À°è vÀªÀÄä
¸ÀªÀÅAqÀÄUÀ½AzÀ vÀ¯ÉalÄÖ »r¹©lÖªÀÅ. HjUÉ
AiÀiÁgÉà ºÉƸÀ§gÀÄ §gÀ° CªÀgÀ£ÀÄß ¸ÀªÀÅAqÀÄ ªÀiÁr §gÀªÀiÁrPÉƼÀî¢zÀÝgÉ,
CªÀÅUÀ½UÉ ©nÖà wAzÀ PÀƼÀÄ ºÉÆmÉÖUÉ ºÀvÀÄÛwÛgÀ°®è. CzÀgÀ®Æè ºÉÆmÉÖ¥ÁrUÁV ªÉõÀ
ºÁQPÉÆAqÀÄ §gÀĪÀ ªÉõÀUÁgÀgÀÄ, zÀÄgÀUÀ ªÀÄÄgÀVAiÀĪÀgÀÄ F PÁªÀ®ÄUÁgÀ ªÀÄA¢
ªÀÄÄV®Ä ºÀjzÀÄ ©zÀÝAvÁUÀÄwÛvÀÄÛ.
EAxÀ ªÉõÀUÁgÀgÀÄ
AiÀiÁgÉà §gÀ° HgÀ ¥ÀæªÉñÀ ªÀiÁqÀĪÀ ¸ÀAzÀ¨sÀðzÀ°è ºÉý PÀ½¹zÀAvÉ HgÀ CUÀ¹UÉ
§AzÀÄ ¸ÁéUÀvÀPÉÌ ¤®ÄèwÛzÀݪÀÅ. ¸ÀĪÀÄä£É ªÀiË£ÀªÁV ¸ÁéUÀw¹zÀÝgÉ AiÀiÁgÀ Q«
¥ÀgÀzÉAiÀÄÆ ºÀjAiÀÄÄwÛgÀ°®è. DzÀgÉ, UÀAl®Ä ºÀjAiÀÄĪÀ ºÁUÉ ¸ÀªÀÅAqÀÄ ªÀiÁqÀÄvÀÛ
§AzÀªÀgÀ PÁ°£ÀªÀgÉUÀÆ ºÉÆÃV, MªÉÆäªÉÄä ªÀÄÄRzÀ ªÉÄÃ®Æ PÉÊAiÀiÁr¹ ¸ÁéUÀw¸ÀĪÀ F
PÁªÀ®ÄUÁgÀ ªÀÄA¢UÉ §AzÀªÀgÀÄ §rUÉ vÉÆÃj¹zÀgÀAvÀÆ ªÀÄÄV¬ÄvÀÄ CªÀgÀ §æºÁäAqÀPÉÌ
¨ÉAQ ©zÀÝAvÁUÀÄwÛvÀÄÛ.
MA¢µÀÄÖ £Á¬ÄUÀ¼ÀÄ HgÀ
w¥ÉàAiÀÄ°è vÀªÀÄä zÉÊ£ÀA¢£À PÉ®¸ÀzÀ°è vÉÆqÀVPÉÆArgÀ¨ÉÃPÁzÀgÉ vÀªÀÄä
PÀÄ®¨ÁAzsÀªÀjAzÀ ¸ÀªÀÅAqÀÄ §AzÀ PÀqÉ Q« CUÀ°¹, vÀªÀÄä §AzsÀÄUÀ½UÉ §AzÉÆzÀVzÀ
¸ÀAzÀ¨sÀðzÀ C¥ÁAiÀĪÀ£ÀÄß ªÀÄ£ÀUÀAqÀÄ £ÁªÀÇ ¸ÁéUÀvÀPÉÌ EzÉÝÃªÉ J£ÀÄߪÀ
jÃwAiÀÄ°è PÉzÀgÀĪÀ PÁAiÀÄPÀ ¤°è¹ ¤AvÀ ¸ÀܼÀ¢AzÀ¯Éà PÀÆUÀÄ ºÁQ UÀAl®Ä
ºÀjzÀÄPÉÆAqÀÄ vÀªÀÄä C¹ÛvÀé ¥ÀæPÀl¥Àr¸ÀÄwÛzÀݪÀÅ. vÀªÀÄä G¥À¹ÜwAiÀÄÄ C¤ªÁgÀåªÁVgÀ¨ÉÃPÉAzÀÄ
w½zÀÄ w£ÀÄߪÀ PÁAiÀÄPÀ ªÀÄÄAzÀÆr C®èµÀÄÖ UÀÄgÀÄwUÉ MAzÀPÀÄÌ ªÀiÁr UÀAl®Ä
ºÀjzÀÄPÉƼÀÄîvÀÛ vÁªÀÇ §AzÀÄ ¸ÉÃjPÉƼÀÄîvÀÛªÉ.
»ÃUÉ Erà HgÀ
£Á¬ÄUÀ¼É®è §AzÀªÀgÀ£ÀÄß ¸ÁéUÀvÀPÉÌ ¤AvÀÄ §gÀªÀiÁrPÉƼÀÄîwÛgÀ¨ÉÃPÁzÀgÉ w¥Éà
¸ÀªÀgÀÄwÛzÀÝ »jQj ºÀA¢UÀ¼ÀÄ ªÉÄÊ gÉÆêÀiÁAZÀ£ÀUÉÆAqÀÄ gÀPÀëuÁvÀäPÀ ¥sÉÆÃdÄ
PÉÆlÖªÀÅ. §AzÀªÀgÀ ¸ÁéUÀvÀPÉÌ ¤AvÀ PÁªÀ®ÄUÁgÀjUÉ vÀªÀÄä JA¢£À JzÀÄgÁ½UÀ¼À
PÀqÉUÉ UÀªÀÄ£À PÉÆqÀĪÀÅzÀÄ DUÀĪÀÅ¢®è. UÀAl®Ä ºÀjzÀÄPÉƼÀÄîªÀÅzÀÄ vÀªÀÄUÁV C®è
J£ÀÄߪÀÅzÀÄ SÁwæAiÀiÁzÀ ªÉÄÃ¯É ºÀA¢UÀ¼ÀÄ vÀªÀÄä gÀPÀëuÁvÀäPÀ ¥sÉÆÃdÄ §zÀ°¹
¤gÁ¼ÀªÁV ªÀÄvÉÛ vÀªÀÄä JA¢£À PÁAiÀÄPÀPÉÌ ¤AvÀÄ©lÖªÀÅ.
ªÉõÀUÁgÀgÀÄ £ÀÄVÎ
§gÀĪÀÅzÀÄ, £Á¬ÄUÀ¼ÀÄ UÀAl®Ä ºÀjzÀÄPÉƼÀÄîªÀÅzÀÄ AiÀiÁªÀÅzÀÆ ¤®è°®è. Hj£À J®è
£Á¬ÄUÀ¼ÀÄ MAzÉ PÀqÉ ¤AvÀÄ »ÃUÉ KPÀ¥ÀæPÁgÀªÁV UÀAl®Ä ºÀjzÀÄPÉƼÀÄîwÛzÀÝgÉ vÀ£Àß
¥ÁrUÉ vÁ£ÀÄ «oÉÆçzÉêÀgÀ UÀÄrAiÀÄ°è ©zÀÄÝPÉÆArzÀÝ PÀªÀ®V UÀÄAqÀĤUÉ
±À§ÝªÀiÁ°£Àå vÀqÉzÀÄPÉƼÀî¯ÁUÀ°®è. MAzÉgÀqÀÄ ¨Áj vÁ£ÀÆ UÀAl®Ä ºÀjzÀÄPÉÆAqÀÄ
£Á¬ÄUÀ½UÉ ©zÀÝ°èAzÀ¯Éà JZÀÑjPÉ PÉÆlÖgÀÆ EªÀ£À KPÀªÉÄêÀ ªÉÄÊQUÉ PÁªÀ®ÄUÁgÀgÀÄ
PÁ¹£À QªÀÄävÀÆÛ PÉÆqÀ°®è. ªÉÆzÀ¯Éà gÁwæ UËqÀjAzÀ ªÀÄAUÀ¼ÁgÀw ªÀiÁr¹PÉÆAqÀÄ
§AzÀÄ E°è ©zÀÄÝPÉÆArzÀÝ ªÀÄÄzÀÄPÀ¤UÉ £Á¬ÄUÀ¼À F KPÀ¥ÀæPÁgÀzÀ ¸ÀªÀÅAr¤AzÀ
vÀ¯ÉalÄÖ »rzÀÄ ºÉÆÃV vÀ£Àß DzsÁgÀPÉÌ ElÄÖPÉÆArzÀÝ KPÉÊPÀ §rUÉAiÀÄ£ÀÄß
JwÛPÉÆAqÀÄ "xÀÆ..... ¤£ËߣÀ....." JAzÀªÀ£Éà ©Ã¹ MUÉzÀ£ÀÄ.
EgÀĪÀ ±ÀQÛAiÀÄ£Éß®è
§¼À¹ MUÉzÀ gÀ¨sÀ¸ÀPÉÌ ¸Àé®à ¨ÉÃPÀĨÉÃPÁzÀÄÝ wAzÀÄ ¨É¼É¢zÀÝ PÀlÄÖªÀĸÁÛzÀ
£Á¬ÄAiÀÄ ªÀĪÀiÁðAUÀPÉÌ §r¬ÄvÀÄ. »ÃUÉ §rzÀ gÀ¨sÀ¸ÀPÉÌ G¹gÀÄ ¤AvÀAvÁV
PÀlÄÖªÀĸÁÛzÀ £Á¬Ä ªÀÄÄV®Ä ºÀjzÀÄ ©Ã¼ÀĪÀ ºÁUÉ aÃjPÉƼÀÄîvÀÛ
©zÀÄÝPÉƼÀÄîwÛgÀ¨ÉÃPÁzÀgÉ, EvÀgÀ £Á¬ÄUÀ¼ÀÄ vÀªÀÄä ¸ÁéUÀvÀ ¥ÀæQæAiÉÄAiÀÄ£ÀÄß
»AzÀPÉÌ vÉUÉzÀÄPÉÆAqÀÄ ¸ÀªÀÅAqÀÄ §zÀ¯Á¬Ä¹ AiÀiÁªÀ ¢QÌUÉ NqÀ¨ÉÃPÉAzÀÄ w½AiÀÄzÉ
ªÀÄÄR ªÀiÁrzÀ ¢QÌUÉ Nl QvÀÛªÀÅ.
±Á¯ÉAiÀÄ PÀA¥ËAr£À°è
¥ÁæxÀð£ÉUÉ ¤AwzÀÝ ªÀiÁ¸ÀÛgÀgÀÄ, ºÀÄqÀÄUÀgÀÄ F CWÁvÀPÁj aÃgÁlPÉÌ ¨ÉaÑ©zÀÄÝ,
¥ÁæxÀð£É ¤°è¸À¨ÉÃPÉÆÃ, ªÀÄÄAzÀĪÀgɸÀ¨ÉÃPÉÆà w½AiÀÄzÉ ºÉqïªÀiÁ¸ÀÛgÀ PÀqÉUÉ
£ÉÆÃrzÁUÀ CªÀgÀÄ ºÁqÀĪÀzÀÄ £ÁqÀVÃvÉAiÀÄ®è, gÁµÀÖçVÃvÉ JAzÀÄ ªÀÄ£ÀUÀAqÀÄ
ªÀÄÄAzÀĪÀgɸÀ®Ä ¸À£Éß ªÀiÁrzÀgÀÄ.
£Á¬ÄAiÀÄ ªÀÄgÀuÁAwPÀ
aÃgÁlzÀ°è CªÀ¸ÀgÀªÀ¸ÀgÀªÁV d£À UÀt ªÀÄ£À ªÀÄÄV¹zÀ ªÀÄPÀ̼ÀÄ ªÀiÁ¸ÀÛgÀgÀ C£ÀĪÀÄwUÀÆ
PÁAiÀÄzÉ PÀA¥ËAqÀÄ ºÁj ºÉÆÃV £Á¬ÄAiÀÄ ¸ÀÄvÀÛ vÀªÀÄäzÉÃAiÀiÁzÀ PÀA¥ËAqÀÄ
gÀa¹zÀgÀÄ. HgÀ ªÀÄA¢, ªÀÄUÀ먀 vÉÆÃlzÀ°è PÉ®¸À ªÀiÁqÀÄwÛzÀÝ ªÀÄA¢, ºÀ¼ÀîzÀ
PÀqÉUÉ JgÀqÀPÉÌ ºÉÆgÀl ªÀÄA¢, ªÀÄ®èAiÀÄå£À UÀÄrUÉ ¨É®è »rAiÀÄ®Ä ºÉÆgÀl ªÀÄA¢,
«oÉÆçzÉêÀgÀ UÀÄrAiÀÄ°èzÀÝ ¸À§vÁzÀ ªÀÄA¢ J®è... J®è £Á¬ÄAiÀÄ aÃgÁlzÀvÀÛ
¸ÉÃjzÀgÀÄ. vÀA©UÉ vÉUÉzÀÄPÉÆAqÀÄ ºÀ¼ÀîzÀ PÀqÉUÉ ºÉÆgÀnzÀÝ §½UÁgÀ ¹zÁæªÀÄUÉ
¥Áæt ¦æÃw ºÀÄnÖ, ¸ÁAiÀÄĪÁUÀ¯ÁzÀgÀÆ ¸ÀÄR¢AzÀ ¸ÁAiÀÄ° JAzÀÄ vÀ£Àß vÀA©UɬÄAzÀ
£Á¬ÄAiÀÄ ¨ÁAiÀÄ°è £Á®ÄÌ ºÀ¤ ¤ÃgÀÄ ©lÖ£ÀÄ. MzÁÝrzÀ £Á¬Ä vÀ£Àß ¸ÀªÀÅAqÀÄ ¤°è¹,
ªÀÄÄR ªÀÄUÀ먀 ºÁQvÀÄ. d£À EzÀgÀ PÀy ªÀÄÄVÃvÀÄ JAzÀÄ ¤lÄÖ¹gÀÄ ©lÖgÀÄ.
DzÀgÉ, PÀxÉ
ªÀÄÄV¢gÀ°®è. E°èAzÀ¯É DgÀA¨sÀªÁ¬ÄvÀÄ. ©Ã¢ wgÀÄUÀĪÀ £Á¬ÄAiÀiÁVzÀÝgÉ AiÀiÁgÀÆ
CzÀ£ÀÄß PÉÃgÀÄ ªÀiÁqÀÄwÛgÀ°®è. DzÀgÉ, £Á¬ÄUÀÆ MAzÀÄ C¹ÛvÀé«vÀÄÛ. HgÀ UËqÀQ
ªÀiÁqÀĪÀ VjAiÀÄ¥ÀàUËqÀgÀ KPÉÊPÀ £Á¬ÄUÉ PÉÆ£ÉUÁ® »ÃUÉ §gÀ¨ÁgÀzÁVvÀÄÛ JAzÀÄ
UÀÄA¥ÀÄ UÀÄA¥ÁV ¤AvÀÄ d£À ªÀiÁvÀ£ÁrPÉƼÀîvÉÆqÀVzÀgÀÄ. ªÀÄÆzÉÆÃqÁåUÀ K£À DVvÀÛ
zsÁr..... ¨ÉÆUÀ½zÀÝgÀ ¨ÉÆÃUÀ¼ÀwzÀݪÀÅ...... ªÀÄƯÁåUÀ ©zÀÝPÉÆAqÀ UÀÄAqÀ¥Àà
¸ÀĪÀÄä£À EgÀ¨ÁgÀzÁ.... FUÀ £ÉÆÃqÀ
VjUËqÀ E£ÉßãÀ ªÀiÁqÁÛ£ÉÆà JAzÀÄ LUÉÆüÀ UÀÄgÀĨÁ¬Ä ªÀÄÄzÀÄQ ¸ÉÆãÀÄUÉÆüÀ
PÀnÖªÀÄÄAzÀ ¤AvÀ §qÀ§r¹vÀÄ.
DzÀgÉ, PÀªÀ®V
UÀÄAqÀÄ£ÉÆA¢UÉ ¤dªÁVAiÀÄÆ ¢UÀÆäqsÀgÁV ¤AvÀªÀgÀÄ §»gÀƦUÁgÀgÀÄ. MªÉÄä¯É MzÀVzÀ F
C»vÀPÀgÀ WÀl£É¬ÄAzÀ ªÀÄÄAzÉãÀÄ ªÀiÁqÀ¨ÉÃPÉAzÀÄ w½AiÀÄzÉà ¤AwgÀ¨ÉÃPÁzÀgÉ,
£Á¬ÄAiÀÄ CAwªÀÄ zÀ±Àð£À ¥ÀqÉzÀ ±Á¯ÉAiÀÄ ªÁ£ÀgÀ ¸ÉÃ£É §»gÀÆ¥ÀUÁgÀgÀvÀÛ Nr §AzÀÄ
C¯ÉÆèAzÀÄ PÀA¥ËAqÀÄ ¤«Äð¹zÀgÀÄ. CzÀgÀ®Æè §»gÀÆ¥ÀUÁgÀgÀ ºÀ£ÀªÀÄAvÀ ªÁ£ÀgÀ
¸ÉãÉUÉ ºÀÄZÀÄÑ»r¹zÀ. ºÀ£ÀªÀÄAvÀ..... ºÀ£ÀªÀÄAvÀ..... JAzÀÄ vÁªÀÇ EAxÀzÉÆAzÀÄ
¥ÁlÄð ºÁQ ±Á¯ÉAiÀÄ°è £ÁlPÀªÁqÀ¨ÉÃPÉAzÀÄ ¨ÉÆÃrðAV£À ºÀÄqÀÄUÀgÀÄ
ªÀiÁvÀ£ÁrPÉÆAqÀgÀÄ.
»ÃUÉ £Á¬ÄAiÀÄ ¸ÀÄvÀÛ,
§»gÀÆ¥ÀUÁgÀgÀ ¸ÀÄvÀÛ PÀA¥ËAqÀ ¤«Äð¸ÀÄvÀÛ ªÁ£ÀgÀ ¸ÉÃ£É ¤AwgÀ¨ÉÃPÁzÀgÉ, CdÄðtV
ªÀÄÄvÁÛöå ªÀiÁ¸ÀÛgÀjUÉ ¦vÀÛ £ÉwÛUÉÃj ¯Áp ZÁfðUÉ ¤AvÀgÀÄ. ªÀÄÄvÁÛöå ªÀiÁ¸ÀÛgÀgÀ
¯ÁpUÉ CAf GaÑ ºÉÆÃAiÀÄÄÝPÉƼÀÄîwÛzÀÝ ºÀÄqÀÄUÀgÀÄ, ¯Áp ZÁeïð ¥ÀæQæAiÉÄ
DgÀA¨sÀªÁzÀ vÀPÀët NlQvÀÛgÀÄ. ±Á¯É ¸ÉÃjzÀ ªÁ£ÀgÀ ¸ÉÃ£É ªÀiÁ¸ÀÛgÀgÀÄ
§gÀĪÀªÀgÉUÀÆ ±Á¯ÉAiÀÄ QqÀQUÀ¼À ªÀÄÆ®PÀ ºÉÆgÀUÉ vÀ¯É vÀÆj¹zÀgÀÄ.
¥ÉÃdgï ªÀÄÆ®PÀ ¸ÀÄ¢Ý
PÀ½¹zÀAvÉ PÀA¨ÁgÀ ºÀÄZÀÑ¥Àà¤AzÀ DVAzÁUÀ¯Éà vÀªÀÄä £Á¬Ä wÃjvÀÄ JAzÀÄ
VjAiÀÄ¥ÀàUËqÀgÀ ªÁqÀUÉ ¸ÀÄ¢Ý ºÉÆìÄvÀÄ. ªÁqÉAiÀÄ »vÀÛ°£À°è £ÁªÀ°UÁågÀ
¨Á¼ÀÄPÀÄ£ÉÆA¢UÉ ªÀÄÄR PÉwÛ¹PÉƼÀÄîwÛzÀÝ UËqÀgÀ §æºÁäAqÀPÉÌ ¨ÉAQ ©zÀÝAvÁ¬ÄvÀÄ.
¸ÀÄ¢ÝAiÀÄ vÀ¼À§ÄqÀ CjvÀÄPÉÆAqÀ VjAiÀÄ¥ÀàUËqÀgÀÄ ºËºÁj ºÁåAUï .... K£ÀÄ....
JAvÀÄ..... J£ÀÄßvÀÛ ºÀÄZÀÑ¥Àà£À£ÀÄß ªÀÄÄAzÀĪÀiÁrPÉÆAqÀÄ «oÉÆçzÉêÀgÀ UÀÄrAiÀÄ
PÀqÉUÉ ºÉÆgÀqÀ®Ä ¹zÀÞgÁzÀgÀÄ.
UËqÀgÀ KPÉÊPÀ
HgÀÄUÉÆïÁVzÀÝ £Á¬Ä FUÀ KPÁKQ C¸ÀĤÃVzÀ ¸ÀAUÀw Erà HgÀ£Éßà ¨Éaѩý¹vÀÄ. ¸ÀtÚ
PÀĤßAiÀiÁVzÁÝUÀ UËqÀgÀ CPÀÌ UÀÄtzÁ¼ÀzÀ vÀ£Àß vÉÆÃl¢AzÀ UËqÀwAiÉÆA¢UÉ PÉÆlÄÖ
PÀ½¹zÀݼÀÄ. PÀĤßAiÀÄÄ UËqÀgÀ ªÀÄvÀÄÛ D¼ÀÄPÁ¼ÀÄUÀ¼À DgÉÊPÉAiÀÄ°è ZÉ£ÁßVAiÉÄÃ
¨É¼ÉzÀÄ zÉÆqÀØzÁVvÀÄÛ. CzÀPÉÌ ¦æÃw¬ÄAzÀ UËqÀgÀÄ ²ªÀ£Áå JAzÀÄ PÀgÉAiÀÄÄwÛzÀÝgÀÄ.
ºÉÆÃzÀ PÁgÀºÀÄtÂÚ«AiÀÄ°è ªÀÄÄzsÉÆüÀzÀ°è f¯Áè ªÀÄlÖzÀ £Á¬ÄUÀ¼À ¥ÀæzÀ±Àð£À
ªÀÄvÀÄÛ ¸ÀàzsÉð EzÁÝUÀ ¸ÀévÀB VjUËqÀgÀÄ vÀªÀÄä mÁæöåPïì vÉUÉzÀÄPÉÆAqÀÄ ²ªÀ£Áå£À
PÀgÀPÉÆAqÀÄ ªÀÄÄzsÉÆüÀPÉÌ ºÉÆÃVzÀÝgÀÄ. C°è J¯ÁègÀ PÀtÄÚPÀÄQÌzÀ £Á¬Ä
¨ÉAUÀ¼ÀÆgÀÄ, ªÀÄÄA§¬Ä¬ÄAzÀ §AzÀ C¢üPÁjUÀ½AzÀ ¸ÉÊ C¤¹PÉÆAqÀÄ f¯ÁèPÀ £ÀA§gï MAzï
§A¢vÀÄÛ. ªÀÄÄzsÉÆüÀzÀ gÀ£Àß ¸ÀPÀð°è£ÁåUÀ UÀįÁ® GPÉÆÌAqÀ HjV §A¢zÀÝ UËqÀægÀÄ
¸ÀAfêÀÄÄAzÀ D®zÀPÀnÖ¬ÄAzÀ ®PÀ̪Àé£À UÀÄrvÁ£À ²ªÀ£Áå£À ªÉÄgÀªÀtÂV vÉUÉ¢zÀÝgÀÄ.
HgÀ ªÀÄA¢AiÉÄ®è vÀªÀÄÆägÀ QÃwð zÉñÀPÉÌ ºÀ©â¹zÀ ²ªÀ£Áå£À §UÉÎ C©üªÀiÁ£À
¥ÀnÖzÀÝgÀÄ. ºÁAUÀ £ÉÆÃrzÀgÀ HgÁ£À ªÀÄA¢£Àß AiÀiÁgÀÆß £Á¬Ä PÀr¢¢Ý®è, PÁr¢Ý®è.
DzÀgÉ, HgÀ ªÀÄUÀÄή°èAiÉÄà vÀªÀÄä vÉÆÃl«zÀÝ PÁgÀt £Á¬Ä HgÀÄ ªÀÄvÀÄÛ vÉÆÃl
JgÀqÀgÀ G¸ÀÄÛªÁjAiÀÄ£ÀÄß vÁ£Éà ªÀ»¹PÉÆAqÀAvÉ ºÉƸÀ§gÀÄ AiÀiÁgÉà §gÀ° CªÀgÀ£ÀÄß
ºÉzÀj¹ ClÄÖªÀÅzÀÄ CzÀgÀ KPÉÊPÀ GzÉÝñÀªÁVvÀÄÛ.
§ºÀÄgÀƦUÀ¼ÀÄ »ÃUÉ
£ÀªÀÄä ºÁUÉ ¸ÁzÁ ¹ÃzÁ §A¢zÀÝgÉ CµÁÖV F gÀA¥À £ÀqÉAiÀÄÄwÛgÀ°®è. DzÀgÉ, §AzÀªÀgÀÄ
gÁªÀiÁAiÀÄt PÁ®¢AzÀ £ÉÃgÀªÁV PÀ°AiÀÄÄUÀPÉÌ §AzÀAvÉ §AzÀÄ ©nÖzÀÝgÀÄ. gÁªÀt vÀ£Àß
UÀzÉAiÉÆA¢UÉ, ºÀ£ÀªÀÄAvÀ vÀ£Àß ¨Á®zÉÆA¢UÉ, gÁªÀÄ®PÀëöätgÀÄ vÀªÀÄä vÀªÀÄä
©®Äè-¨ÁtzÉÆA¢UÉ, ¹ÃvÁ vÀ£Àß ªÉÊAiÀiÁågÀzÉÆA¢UÉ »ÃUÉ KPÁKQ HgÀ CUÀ¹UÉ §A¢½zÁUÀ
¸ÀºÀdªÁVAiÉÄà F CwªÀiÁ£ÀªÀgÀ£ÀÄß PÀAqÀ UËqÀgÀ £Á¬Ä EªÀgÀ£Éß®è ªÀÄvÉÛÃ
gÁªÀÄgÁdåPÉÌ CnÖ©qÀ¨ÉÃPÉAzÀÄ ¥ÀæweÉÕ ªÀiÁrzÀAvÉ CUÀ¹ ¨ÁV°£À°èAiÉÄà CªÀgÀ£ÀÄß
vÀgÀÄ© ¤°è¹vÀÄ. HgÀ G¸ÀÄÛªÁjAiÀÄ »jAiÀĪÀ£Éà »ÃUÉ PÁ¼ÀUÀPÉÌ ¤AvÁUÀ ¥ÀÄr
¸ÉʤPÀjUÉ CzÉíÃUÉ ¸ÀĪÀÄä¤gÀ¯Á¢ÃvÀÄ? vÀªÀÄä PÀvÀðªÀåªÀ£ÀÄß ¥Á°¸À¢zÀÝgÉ gÁwæ
ªÀÄ£É ªÀÄ£É wgÀÄUÀĪÁUÀ zÉÊ£ÀA¢£À PÀƼÀÄ vÀ¦àÃvÉAzÀÄ HgÀ EzÀÝ©zÀÝ £Á¬ÄUÀ¼É®è
»AqÀÄ PÀÆr UÀAl®Ä ºÀjzÀÄPÉÆAqÀÄ ¨ÉÆUÀ¼ÀÄwÛgÀ¨ÉÃPÁzÀgÉ «oÉÆçzÉêÀgÀ UÀÄrAiÀÄ
ªÀÄÄA¨sÁUÀzÀ°è F C»vÀPÀgÀ WÀl£É £ÀqÉzÀÄ ºÉÆìÄvÀÄ.
ªÉÄïÁV »A¢£À ¢£À
gÁwæAiÉÄà UËqÀgÀÄ UÀÄAqÀÄ£À£ÀÄß ªÁqÀUÉ PÀgɹPÉÆAqÀÄ ªÀÄAUÀ¼ÁgÀw ªÀiÁrzÀÝgÀÄ.
UËqÀgÀ vÉÆÃlzÀ §¢AiÀÄ°èAiÉÄà ºÀ¼ÀîPÉÌ ºÀwÛPÉÆAqÀÄ UÀÄAqÀÄ£À vÀÄAqÀÄ ¨sÀÆ«Ä
EvÀÄÛ. C°è DvÀ ªÀÄÄAUÁgÀÄ, »AUÁgÀÄ ¦ÃPÀÄ vÉUÉzÀÄPÉƼÀÄîvÀÛ EgÀĪÀ vÀ£ÉÆߧâ£À
ºÉÆmÉÖ §mÉÖUÉ ElÄÖPÉÆArzÀÝ. DzÀgÉ, F vÀÄAqÀÄ ¨sÀÆ«ÄAiÀÄ°è UËqÀgÀzÀÄ
ªÉÆzÀ°¤AzÀ®Æ PÀtÄÚ ©¢ÝvÀÄÛ. »AzÉ UËqÀQ ªÀÄ£ÉvÀ£ÀzÀªÀgÉ UÀÄAqÀÄ£À ªÀÄÄvÁå£À
G½ªÉÄ ªÀiÁrPÉƼÀî®Ä ©nÖzÀÝ eÁUÀ mɣɤìAiÀÄ°è UÀÄAqÀ£À ºÉ¸ÀjUÉ G½zÀPÉÆAqÀÄ
§A¢vÀÄÛ.
HgÀ §¼ÀUÁgÀ FgÀÆ FUÀ
¸ÁzsÀÄ DV ºÉÆÃV ¤ÃgÀ ºÉüÁPÀ ¥Àæ¹zÀÞ DUÁå£ÀAvÀ UËqÀgÀÄ PÉýzÀÝgÀÄ. FgÀÆ ¸ÁzsÀÄ
PÉÊ vÉÆÃj¹zÀ PÀqÉ ¨sÁVÃgÀy vÀÄA© §gÁÛ¼ÀAvÀ ¥ÀæwÃw. ¸ÀÄvÀÛ CxÀtÂ, UÉÆÃPÁPÀ,
gÁAiÀĨÁUÀzÁUÀ ¥Àæ¹¢Þ DVzÀÝ ¸ÁzsÀÄ£À dvÀÛ, ¥ÀÄuÉ, ¸ÁAUÀ°AiÀĪÀgÀ PÀgɹ ¤ÃgÀ ºÉý¹PÉƼÀÄîwÛzÀÝgÀÄ.
CªÀ HgÀ PÀqÉ §gÉÆÃzÀ PÀr«Ä. DzÀgÀ, HgÀ ®PÀ̪Àé£À eÁwæ vÀ¦à¸ÀÄwۢݮè. ªÉƤß
eÁwæV §AzÁUÀ UÀÄAqÀÄ£À F ¨sÀÆ«ÄAiÀÄ°è ¨ÉÆÃgÀÄ ºÁQ¹zÀgÉ ¤ªÀÄä vÀ¯ÉvÀ¯ÁAvÀgÀ
¸ÀjzÀÄ ¤®ÄèªÀ ºÁUÉ ¤ÃgÀÄ ©Ã¼ÀÄvÀÛzÉ JAzÀÄ ºÉý ºÉÆÃzÀ ªÉÄîAvÀÆ UËqÀgÀÄ F
¨sÀÆ«ÄAiÀÄ ªÉÄÃ¯É DUÁzsÀªÁzÀ D¸É ElÄÖPÉÆArzÀÝgÀÄ.
¤Ãj£À FgÀƸÁzsÀÄ »ÃUÉ
ºÉý ºÉÆÃzÀ ¢£À¢AzÀ®Æ UËqÀjUÉ ¤zÉÝ ºÀvÀÛ°®è. MA¢£À ®PÀ̪Àé£À UÀÄrUÉ ºÉÆÃV
§gÀÄwÛzÀÝ UÀÄAqÀÄ£À£ÀÄß UËqÀgÀÄ vÀgÀÄ© "K ªÀÄÄzÀPÁ ... ¤Ã K£À vÀÄUÉÆÃw
vÀÄUÉÆà .... D eÁUÀ Cl £À£Àß ºÉ¸ÀjV §j¹©qÀÄ....EgÁAªÀ ¤Ã M§â£À... £Á½ UÉÆlPï
CAzÀªÀiÁå¯É AiÀiÁgÀgÉà §AzÀÄ ¸ÉÃjPÉƼÀî¨ÁgÀzÀÄ... ¤Ã EgÀÄvÀ£Á PÁ¼ÀÄ PÀr Cj«
CAZÀr ¤AzÀ £ÁªÀ £ÉÆÃqÉÆÃPÉÆÃwªÀ.... ¸ÀĪÀÄß £ÀªÀÄä vÁélzÁUÀ w£ÀPÉÆAqÀ EgÀÄ...
¤£ÀUÀÆ ªÀAiÀĸÁìvÀÄ.... E£ÀÄß zÀÄqÀzÀ AiÀiÁjV ªÀiÁqÁAªÀ......" CA¢zÀÝgÀÄ.
DzÀgÉ, vÀ£Àß ºÉ¸Àj£ÉÆA¢UÉ EgÀĪÀ F KPÉÊPÀ D¹ÛAiÀÄ£ÀÄß UËqÀjUÉ §gÉzÀÄ ¥ÀgÀzÉò
DUÀĪÀ «ZÁgÀ UÀÄAqÀĤUÉ EgÀ°®è. ºÀUÀÎ ºÀjAiÀÄ°®è. PÉÆÃ®Ä ªÀÄÄjAiÀÄ°®è JA§
UÀÄAqÀÄ£À ¤®Ä«£À°è §zÀ¯ÁªÀuÉ PÁtzÉà UËqÀgÀÄ PÉÊ PÉÊ »ZÀÄQPÉÆAqÀgÀÄ.
DzÀgÉ, UÀļÀîªÀAzÀÄ
ºÀjzÀgÉãÀÄ.... eÉÆÃPÀĪÀiÁgÀAzÀÄ ªÀÄÄjzÀgÉãÀÄ J£ÀÄߪÀ ¯ÉPÀÌzÀ°èzÀÝ UÀÄAqÀÄ
EgÉÆÃvÀ£Á gÁdªÀĤ±Á DV §zÀÄQzÀgÀ ¸ÁPÀAvÀ ¤²ÑAvɬÄAzÀ EzÀÝ.
ºÉÃUÁzÀgÀÆ ªÀiÁr EªÀ£À
d«ÄãÀÄ zÀQ̹PÉƼÀî¨ÉÃPÉAzÀÄ UËqÀgÀÄ wêÀiÁð¤¹zÀAwvÀÄÛ. MAzÉgÀqÀÄ ¨Áj
dªÀÄRAr¬ÄAzÀ ¥ÉÆðøÀÄ ¥sËdÄzÁgÀÄ PÀgɹPÉÆAqÀÄ UÀÄAqÀĤUÉ CAfPÉ ºÁQ £ÉÆÃrzÀgÀÄ,
¥ÀnÖ CAUÀr PÀ®èAiÀĸÁé«ÄUÀ½AzÀ §Ä¢ÝªÀiÁvÀÄ ºÉý¹ £ÉÆÃrzÀgÀÄ, G¢æ PÉÆqÀÄwÛzÀÝ
¸ÁªÁÌgÀ §¸À°AUÀ¥Àà£ÀªÀjUÉ G¢æ ¤°è¸À®Ä ºÉýzÀgÀÄ, »lÄÖ PÉÆmÁÖUÉƪÉÄä gÉÆnÖ §rzÀÄ
PÉÆqÀÄwÛzÀÝ UÀÄgÀĨÁ¬Ä ªÀÄÄzÀÄQUÉ CAfQ ºÁQ CzÀ£ÀÆß ¤°è¹zÀgÀÄ. EµÀÖPÀÆÌ UÀÄAqÀÄ
ªÀÄtÂAiÀÄ°®è. F WÀl£ÁªÀ½UÀ¼ÀÄ £ÀqÉAiÀÄÄwÛgÀ¨ÉÃPÁzÀgÉ FUÀ KPÁKQ UËqÀgÀ £Á¬Ä CzÀÆ
UÀÄAqÀÄ£À PÉÆð¤AzÀ ¸ÀvÀÛzÀÄÝ UÀÄAqÀÄ£À PÀxÉ ªÀÄÄVzÀAvÉ JAzÀÄ d£À
ªÀiÁvÀ£ÁrPÉƼÀîvÉÆqÀVzÀgÀÄ.
PÀxÉ ªÀÄÄVAiÀÄĪÀ
ªÉÆzÀ®Ä HgÀ°è ªÀÄvÉÆÛAzÀÄ ªÉÄgÀªÀtÂUÉ £ÀqÉAiÀĨÉÃQvÀÄÛ. ºÀÄZÀÑ¥Àà£ÉÆA¢UÉ
UËqÀgÀÄ ®UÀĨɬÄAzÀ §AzÀgÀÄ. UËqÀgÀÄ §gÀĪÀ ¸ÀÄ¢Ý PÉý DUÀ¯Éà ªÀÄPÀ̼ÀÄ
ªÀÄjUÀ¼ÉÆA¢UÉ ªÀÄvÉÆÛAzÀÄ PÀA¥ËAqÀÄ C°è d£ÀjAzÀ ¤ªÀiÁðtªÁVvÀÄÛ. UÀÄrAiÀÄ
ªÀÄƯÉAiÀÄ°è UÀÄAqÀÄ C¥ÀgÁ¢ü ªÀÄ£ÉÆèsÁªÀ¢AzÀ ¤AwzÀÝ. gÁªÀiÁAiÀÄtzÀ ªÀÄA¢
PÀ°AiÀÄÄUÀzÀ PÀgÁ¼À ¢£ÀªÀ£ÀÄß ±À¦¸ÀÄvÀÛ EzÀÝ©zÀÝ ºÁqÀÄUÀ¼À£ÀÄß ªÀÄgÉvÀªÀgÀAvÉ
DPÁ±À £ÉÆÃqÀÄvÀÛ ¤AwzÀÝgÀÄ. UËqÀgÀ §UÉÎ CzÁUÀ¯Éà CªÀgÀ »A¢£À ZÀjvÉæ ¨sÀÆUÉÆî
ºÉý ºÀÆUÁgÀ PÀ®è¥Àà CAfQ ºÁQzÀÝ ¸ÀévÀB ¹ÃvÁ£À ¥ÁvÀæªÀ»¹zÀÝ gÁªÀt£À ¸ÉƸÉ
CAzÀgÉ gÁªÀt ¥ÁvÀæzsÁjAiÀiÁVzÀݪÀ£À ªÀÄUÀ£À ºÉAqÀw C¢üÃgÀ¼ÁV ¤AwzÀݼÀÄ. PÀtÄÚ
ªÀÄÆV¤AzÀ ZɮĪÉAiÀiÁVzÀÝ CªÀ¼À£ÀÄß £ÉÆÃqÀ®Ä HgÀ ¥ÀqÉØ ºÀÄqÀÄUÀgÀÄ »AqÀÄ
PÀÆrzÀÝgÀÄ. PÀ¼ÉzÀ ¨Áj ºÉÆ£ÀªÁqÀzÀ UÉÆlPÀªÀé£À eÁvÉæUÉ QæPÉmï ªÀiÁåZï DqÀ®Ä
ºÉÆÃVzÁÝUÀ C°è "ZÉAUÀÄ ZÉAUÉAzÀÄ ºÁqÀĪÁ ..." JAzÀÄ ºÁqÀÄ ºÉüÀÄvÀÛ
PÀÄtÂAiÀÄÄwÛzÀÝ F ZɮĪÉAiÀÄ ¨É£ÀÄß ºÀwÛ EzÉà ¥ÀqÉØ ºÀÄqÀÄUÀgÀÄ
ªÉÄîĥÀàgÀVªÀÄoÀzÀ §¸ÀªÀgÁd¸Áé«ÄUÀ½AzÀ ¨ÉʹPÉÆAqÀÄ §A¢zÀÝgÀÄ. FUÀ ¸ÀévÀB
ªÀiÁzsÀÄj ¢QëvÀ¼Éà ¥ÀævÀåPÀë¼ÁzÀAvÉ vÀªÀÄÆäjUÉ §A¢gÀ¨ÉÃPÁzÀgÉ aPÀÌ¥ÀqÀ¸À®VUÉ
MAqÉà DqÀ®Ä ºÉÆÃUÀ¨ÉÃPÁzÀªÀgÀÄ ¥ÀæªÁ¸À gÀzÀÄÝ ªÀiÁr E°èAiÉÄà G½¢zÀÝgÀÄ.
ªÀiÁªÀ gÁªÀt¤UÉ ¹ÃvÉ
HgÀÄ ©lÄÖ Nr ºÉÆÃUÉÆÃt §jæ JAzÀÄ PÀ°UÁ®zÀ ªÀiÁvÀÄ ºÉýzÀݼÀÄ. gÁªÀt ªÀiÁªÀ
vÀ£Àß FªÀgÉV£À wgÀÄUÁlzÀ°è EAxÀ ¸ÀAzÀ¨sÀðªÀ£ÀÄß JAzÀÆ JzÀÄj¹gÀ°®è. Nr ºÉÆÃzÀgÉ
J°è ªÀÄÄAzÉ vÀªÀÄä ¦Ã½UÉ F HgÀ PÀqÉ ªÀÄÄR ºÁPÀĪÀÅzÀÄ vÀ¦àÃvÀÄ... §AzÀzÀÄÝ §gÀ°
JAzÀÄ ¤AvÀÄ ©nÖzÀÝgÀÄ. EzÁªÀ ¥ÀjªÉ¬Ä®èzÉà gÁªÀt£À ªÀÄUÀ ºÀ£ÀĪÀÄAvÀ
¥ÁvÀæzsÁjAiÀÄÄ ºÀÆUÁgÀ PÀ®è¥Àà£ÉÆA¢UÉ UÀuÉñÀ ºÀaÑPÉÆAqÀÄ ¤AwzÀÝ. ºÀ£ÀĪÀÄAvÀ
HgÀ ºÀÄqÀÄUÀgÀ D±ÀÑgÀåzÀ ¸ÀAPÉÃvÀªÁVzÀÝ. UËqÀgÀ £Á¬Ä ¸ÀvÀÛ WÀl£É¬ÄAzÀ HgÀ°è §»gÀÆ¥ÀUÁgÀgÀ
Dl £ÀqÉAiÀÄzÀ §UÉÎ d£À ªÀiÁvÀ£ÁrPÉƼÀÄîwÛzÀÄÝzÀ£ÀÄß PÀAqÀ ªÀÄPÀ̼ÀÄ ¤gÁ¸É¬ÄAzÀ
ºÀ¼ÀºÀ½¹zÀÝgÀÄ.
UËqÀgÀÄ §AzÁUÀ d£À
¸ÀjzÀÄ ¤AvÀgÀÄ. C°è ¤ÃgÀªÀ ªÀiË£À DªÀj¹vÀÄ. £Á¬Ä §½ §AzÀÄ JgÀqÀÄ ºÀ¤ PÀtÂÚgÀÄ
ºÁQzÀgÀÄ. £Á¬Ä ¸ÀÄvÀÛ MAzÀÄ gËAqÀÄ ºÁQ ¤AwzÀÝ d£ÀjAzÀ DzÀ WÀl£ÉAiÀÄ «ªÀgÀ
¥ÀqÉzÀgÀÄ. UÀÄAqÀÄ£À PÉÆÃ®Ä C°èAiÉÄà ©¢ÝvÀÄÛ. UÀÄrAiÀÄ ªÀÄĪÀÄzÉ vÀ¯É vÀVι
¤AwzÀÝ UÀÄAqÀÄ£À£ÀÄß, ¸À±ÀÛç¸ÀfÓvÀ gÁªÀiÁAiÀÄtzÀªÀgÀ£ÀÄß MªÉÄä £ÉÆÃr PÀtÄÚ
PÉA¥ÀUÉ ªÀiÁrzÀgÀÄ. UËqÀgÀÄ PÀtÄÚ PÉA¥ÀUÉ ªÀiÁrzÀgÉAzÀgÉ ªÀÄÄVÃvÀÄ. CzÀÄ ²ªÀ£À
ªÀÄÆgÀ£ÉAiÀÄ PÀtÄÚ vÉgÉzÀAvÉ.
UËqÀgÉÆA¢UÉ §A¢zÀÝ
¸ÀÆgÀåªÀA² UÉÆÃ¥Á®¤UÉ UËqÀgÀÄ DqÀðgÀÄ ªÀiÁrzÀgÀÄ. PÉÃjUÉ ºÉÆÃV HzÀÆ ªÀÄA¢UÉ
ºÉý ¨Á, ¨sÁeÁ ¨sÀdAwæAiÉÆA¢UÉ £ÀªÀÄä ²ªÀ£Áå£À ªÉÄgÀªÀtÂV vÀVÃj. ¸ÀÆgÀUÉÆAqÀ
ªÀįÉèò CAUÀrUÉ ºÉÆÃV JqÀØ «ÄÃlgÀ Cj« vÀAzÀÄ gÀ¸ÀÆ®UÀ ZÉ®ÆvÁV ²«£Áå£À CAV
ºÉÆ°AiÀiÁPÀ ºÉüÀÄ. aPÀÌ®Q PÀvÀÛgÀV ºÀj¨Á£À PÀ½¹ ¥À®oÀt PÁ²Ã£ÁxÀUÀ ºÀÆ PÀ½¸ÁPÀ
ºÉüÀ..... ¸ÀgÀé HgÀ ªÀÄA¢AiÉįÁè ªÉÄgÀªÀtÂVV ¤¯ÁèPÀ ºÉʧwÛ ©üêÀIJUÉ ºÉý
PÀ½¸À..... JAzÀÄ ¥ÀæPÀn¹, £ÀªÀÄä vÉÆÃlzÁUÀ ²ªÀ£Áå£À ªÀÄtÚ DUÀ° JAzÀgÀÄ. C°èÃvÀ£Á
ªÉõÀUÁgÀ ªÀÄA¢V HgÀ ©qÀ¨Áåræ CAvÁ ºÉüÀÄ. ªÀÄÄzÀPÀUÀ UÀÄrAiÀiÁUÀ EgÁPÀ ºÉýæ
.... ¸ÀAfêÀÄÄAzÀ K£ÁgÀ MAzÀ DUÀ¨ÉÃPÀÄ JAzÀgÀÄ.
UËqÀgÀ eÉÆÃqÉwÛ£À
UÁrªÀiÁåUÀ ¹AUÁgÀ ªÀiÁr ²ªÀ£Áå£À PÀÆræ¹ «oÉÆçzÉêÀgÀ UÀÄr¬ÄAzÀ ªÉÄgÀªÀtÂUÉ
ºÉÆgÀnvÀÄ. PÁ¥Éì ZÀAzÀÆ£À CAUÀqÁå£À ¥ÀmÁQ, UÀįÁ®Ä vÀAzÀÄ ºÁj¹zÀgÀÄ. ªÉÄgÀªÀtÂV
DgÁågÀ NtÂ, LUÉÆüÀ NtÂ, ¸ÁªÁÌgÀ NtÂ, §rUÁågÀ NtÂ, ºÉUÉÆÎAqÁgÀ Nt ªÉÆzÀ®
ªÀiÁrPÉÆAqÀÄ D®zÀPÀnÖ ªÀÄÄAzÀ ºÁ¹ vÁémÁ ªÀÄÄlÄÖªÀÅzÀPÀÌ ¸ÀÆAiÀÄð M¥Áàj ºÉƽî
¥ÀqÀĪÀtzÁUÀ PÉA¥À gÀUÀvÀ DVzÀÝ.
¸ÀAfêÀÄÄAzÀ ªÁqÉÃzÁUÀ
¥ÀAZÁ¬ÄÛ ¸ÉÃjvÀÄ. F WÀl£ÉUÉ ¸ÁQëAiÀiÁzÀAwzÀÝ ±Á¯ÉAiÀÄ ªÀiÁ¸ÀÛgÀjUÀÆ ºÁdjgÀ®Ä
DzÉñÀ ºÉÆÃVvÀÄÛ. ºÉÆmÉÖ¥ÁrUÁV §A¢zÀÝ gÁªÀiÁAiÀÄtzÀ ªÀÄA¢ UËqÀgÀ ªÁqÉAiÀÄ°è
MnÖzÀÝ eÉÆüÀzÀ fîUÀ¼À£ÀÄß Jt¸ÀÄvÀÛ ¯ÉPÀÌ vÀ¥ÀÄàvÀÛ ¤AwzÀÝgÀÄ. F HgÀÄ ªÀÄÄV¹
ªÀÄÄAzÉ CrºÀÄrUÉ ºÉÆÃUÀ¨ÉÃPÁVzÀÝ ªÉõÀUÁgÀgÀÄ vÀªÀÄä JA¢£À ªÉõÀ vÀgÀzÀ PÁgÀt
¸ÀAeÉAiÀiÁzÀgÀÆ gÁªÀiÁAiÀÄtzÀ ¢üj¸ÀÄUÀ¼À£ÀÄß PÀ¼ÀagÀ°®è. ¹ÃvÁ¼À ¥ÁvÀæzsÁj
ªÀiÁªÀ gÁªÀt£À ªÀÄgÉAiÀÄ°è ªÀÄĸÀÄPÀÄ ºÁQPÉÆAqÀÄ ¤AwzÀݼÀÄ. CªÀ¼À ZɮĪÀ£ÀÄß
vÀÄqÀÄV¤AzÀ ¸À«AiÀÄ®Ä QæPÉlÖ nêÀÄÄ ªÁqÉAiÀÄ°è eÁUÀ ªÀiÁrPÉÆArvÀÄÛ. C¥ÀgÁ¢ü
¸ÁÜ£ÀzÀ°èzÀÝ UÀÄAqÀÄ UËqÀgÀ zÁ¨ÉAiÀÄ°è M§âAnAiÀiÁV ¤AwzÀÝ.
AiÀÄPÀÄÌAr ªÀÄÄvÁÛöå
ªÀiÁ¸ÀÛgÀgÀ£ÀÄß PÀgÉzÀÄ UËqÀgÀÄ EzÀgÀ°è §»gÀÆ¥ÀUÁgÀgÀ ¥ÁvÀæzÀ §UÉÎ PÉýzÀgÀÄ.
PÀ¯Á«zÀgÀ §UÉÎ PÁ¼Àf PÀPÀÄ̯Áw EzÀÝ ªÀÄÄvÁÛöå ªÀiÁ¸ÀÛgÀgÀÄ ¸À¨sÉUÉ PÉÊ ªÀÄÄVzÀÄ
¸ÀĪÀÄä£Éà DlPÉÌ §AzÀ F ªÀÄA¢ÃzÀÄ K£À vÀ¦à®è, ºÉÆnÖ ºÉÆjAiÀiÁPÀ §AzÀ ªÀÄA¢Ã£À
»ÃAUÀ vÀgÀÄ© ºÉÆnÖ GgÀ¸ÉÆÃzÀÄ ¸ÀjAiÀiÁUÀ°QÌ®è. JAzÀgÀÄ. ªÀiÁ¸ÀÛgÀgÀ PÀgÀ¼ÀÄ
»AqÀĪÀ ªÀiÁwUÉ d£À vÀ¯ÉzÀÆVzÀgÀÄ. UËqÀgÀÄ CªÀgÀ£ÀÄß ©lÄÖ©qÀĪÀ DzÉñÀ ¤ÃrzÁUÀ
gÁªÀiÁAiÀÄtzÀ ªÀÄA¢ ¤lÄÖ¹gÀÄ ©lÖgÀÄ. EµÀÄÖ ¨ÉÃUÀ£Éà vÀªÀÄä ªÀ£ÀªÁ¸À vÀ¦àzÀPÉÌ
vÀzÀ®¨ÁV ®PÀ̪Àé£À ªÀÄ£ÀzÁUÀ £É£ÉzÀÄ ªÁqɬÄAzÀ ºÉÆgÀ§AzÀgÀÄ.
HgÀ°è E®èªÉ ¸ÀÄvÀÛ
¸ÁªÀ¼ÀV, £ÁUÀ£ÀÆgÀ, lPÀ̼ÀQ, aPÀÌ®Q, UÉÆÃoÉ, UÀzÁå¼À, PÀ£ÉÆß½î AiÀiÁªÀÅzÉÃ
HgÀ°è eÁvÉæ, GgÀĸÀÄ ¸ÀAzÀ¨sÀðzÀ°è £ÁlPÀ £ÀqÉzÀgÀÆ C°è ¥ÀæzsÁ£À ¥ÁvÀæ
ªÀ»¸ÀÄwÛzÀÝ ºÀÆUÁgÀ PÀ®è¥Àà §»gÀÆ¥ÀUÁgÀgÀ£ÀÄß ºÉÆnÖ ¸Áé«ÄUÉÆüÀ ºÉÆmÉðUÉ
PÀgÉzÀÄPÉÆAqÀÄ ºÉÆÃzÀ. CzÉà vÁ£É D®zÀPÀnÖ vɼÀUÀ ¨sÀf PÀjAiÀÄÄwÛzÀÝ ¹£ÀUÁgÀ
¥ÁgÀƨÁ¬Ä ªÀÄÄzÀÄQ ºÀwÛgÀ ºÀvÀÛ gÀÆ¥Á¬ÄzÀ ¨sÀf PÀnÖ¹PÉÆAqÀÄ §AzÀÄ ºÉÆmÉîzÁ£À
ZÀÆqÁ eÉÆÃr w£ÁßPÀ PÉÆlÖ, ªÀiÁå® ©¹©¹ ZÁ PÀÄr¹ ºÉƸÀ¥Áån UÀt¥Àw UÀÄrvÁ£À ºÉÆÃV
©Ã¼ÉÆÌlÄÖ §AzÀ. £ÁåAiÀÄ wêÀiÁð£ÀPÀÆÌ PÁAiÉÄÝà ªÉõÀUÁgÀgÉÆA¢UÉ ªÁqɬÄAzÀ
ºÉÆgÀ§A¢zÀÝ ªÀiÁzsÀÄj ¢QëÃvÀ¼À C©üªÀiÁ¤UÀ¼ÀÄ CªÀ¼ÀÄ ªÀÄgÉAiÀiÁUÀĪÀªÀgÉUÀÆ
UÀt¥ÀwUÀÄrAiÀÄ PÀnÖªÀiÁå® ¤AvÀÄ £ÉÆÃqÀÄvÀÛ ¨sÁgÀªÁzÀ ºÀÈzÀAiÀÄ¢AzÀ
PÉʩùzÀÝgÀÄ. ªÀÄÄAeÁ£É¬ÄAzÀ £Á¬Ä ¸ÀÆvÀPÀ PÁgÀtªÁV K£À£ÀÆß wA¢gÀ¢zÀÝ ªÉõÀUÁgÀ
ªÀÄA¢UÉ PÀ®è¥Àà£À DwxÀå¢AzÀ ºÉÆmÉÖUÉ DzsÁgÀªÁzÀ ªÉÄÃ¯É ®UÀħUɬÄAzÀ ªÀÄrعzÀÝ£À
UÀÄrzÁn ªÀÄÄA¢£À HgÀÄ ¸ÉÃjzÀgÀÄ.
EvÀÛ UËqÀgÀ ªÁqÉAiÀÄ°è
£ÁåAiÀÄ wêÀiÁð£ÀªÁVvÀÄÛ. vÉÆÃl ªÀÄvÀÄÛ HgÀ ªÁqÉAiÀÄ£ÀÄß PÁAiÀÄÄwÛzÀÝ KPÉÊPÀ
PÁªÀ¯ÁVzÀÝ ªÀÄvÀÄÛ zÉñÀPÀÌ ¥Àæ¹¢ÞAiÀiÁVzÀÝ £Á¬ÄAiÀÄ£ÀÄß «£ÁPÁgÀt PÉÆAzÀ
UÀÄAqÀÄ £Á¬ÄAiÀÄ ¸ÀªÀiÁ¢ü PÀlÖ®Ä ºÀvÀÄÛ ¸Á«gÀ gÀÆ¥Á¬Ä PÉÆqÀ¨ÉÃPÉAzÀÄ ºÉý
¥ÀAZÁ¬ÄÛ ªÀÄÄV¹zÀÝgÀÄ. J®è MvÀÛqÀUÀ¼À £ÀqÀÄªÉ UÀÄAqÀÄ vÀ¯ÉAiÀiÁr¹zÀÝ.
EgÀĪÀ KPÉÊPÀ vÀÄAqÀÄ
¨sÀÆ«Ä ©lÖgÉ UÀÄAqÀĤUÉ ¨ÉÃgÉ D¹Û EgÀ°®è. CzÀgÀ°èAiÉÄà UÀÄr¸À®Ä ºÁQPÉÆAqÀÄ
vÀ£ÀßzÉ£ÀÄߪÀ ¨sÀÆ«ÄAiÀÄ°èAiÀÄgÀ¨ÉÃPÁzÀgÉ FUÀ CzÀPÀÆÌ §AzÀ ¸ÀAZÀPÁgÀ¢AzÀ
ªÀÄÄzÀÄPÀ C¢üÃgÀ£ÁzÀ. vÀ£Àß ¸ÀºÁAiÀÄPÉÌ §gÀzÀ ¯ÉÆÃPÀªÀ£ÀÄß ±À¦¹zÀ. ¨sÁgÀªÁzÀ
ºÉeÉÓUÀ½AzÀ vÀ£Àß UÀÄr¸À°UÉ gÁwæ §AzÁUÀ CzÁUÀ¯Éà CzÀ£ÀÄß ¸ÀÄlÄÖ ºÁQzÀÝgÀÄ.
CªÀ£À d«Ää£À°èAiÉÄà £Á¬Ä ¸ÀªÀiÁ¢ü ªÀiÁqÀ¯ÁVvÀÄÛ.
"£Á£À £Á¬ÄAiÀiÁV
AiÀiÁPÀ ºÀÄlÖ¨ÁgÀzÁVvÀÄÛ" J£ÀÄßvÀÛ ¸ÀÄlÖ UÀÄr¸À®Ä ªÀÄÄAzÉ ªÀÄÄV®
aPÉÌUÀ¼ÀvÀÛ ªÀÄÄRªÀiÁr ªÀÄ®VzÀ. JµÀÄÖ ºÉƼÁårzÀgÀÆ ¤¢Ý C£ÉÆßÃzÀÄ ¸ÀĽð®è.
ZÀAzÁæªÀÄ £ÉwÛªÀiÁå® ªÀiÁr ¸ÀÄvÀÛ ¨É¼ÀPÀ ZÉ°èzÀÝ HgÀ ºÀ¼ÀîzÀ zÀArªÀiÁå® PÁªÀ®Ä
£Á¬ÄUÀ¼ÀÄ «avÀæªÁV C¼ÀÄwÛzÀÝ£ÀÄ. PÀgÁ¼À gÁwæ ªÀÄÄzÀÄPÀUÀ AiÀiÁªÀÅzÀÆ »vÀ
C¤¸À°®è. vÀ£ÀßzÉ£ÀÄߪÀ ¨sÀÆ«ÄAiÀÄ ªÀÄtÚ UÁé¼É ªÀiÁr ºÀtÂUÉ, UÀzÀÝPÀÌ ºÀaÑPÉÆAqÀ
UÀļÉÆà CAvÁ CvÀÛ MªÉÄä¯Éà JzÁݪÀ£À ¸ÀÆAiÀÄð ZÀAzÀægÁ ¤ÃªÀ ¤AvÀ PÁ¬Äj JAzÀÄ
HgÀPÀqÉ MªÉÄä ªÀÄÄR ªÀiÁr HgÁ£À C¯Á§zÉêÀgÀ ªÉÆzÀ® ªÀiÁr J¯Áè zÉêÀjUÀÆ
£ÀªÀĸÁÌgÀ ºÉý HgÀ PÀqÉ ¨É£Àß ªÀiÁr £ÀqÀzÀ £ÀrzÁ... £ÀqÀzÀ £ÀrzÁ..... MlÖ
¨É¼ÀPÀ ºÀj°®è.
*-*-*-*-*
«¼Á¸À :
qÁ. ¥ÀæPÁ±À UÀ. SÁqÉ
¸ÉPÀÖgï £ÀA. 63,
£ÀªÀ£ÀUÀgÀ, ¨ÁUÀ®PÉÆÃl.
ªÉÆ: 98455 00890
ಮಕ್ಕಳ ಸಾಹಿತ್ಯ ಭವಿಷ್ಯತ್ತಿನ ಚಿಂತನೆ
ಮಕ್ಕಳ ಸಾಹಿತ್ಯದ ಭವಿಷ್ಯತ್ತಿನ ಚಿಂತನೆ.
-ಡಾ.ಪ್ರಕಾಶ ಗ.ಖಾಡೆ,
ಬಾಗಲಕೋಟ
ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು ಕಟ್ಟಿಕೊಡುವ ಕೆಲಸ ಆ ಕಾಲದಲ್ಲಿ ಬೆಳಗಾವಿ ಮತ್ತು ಧಾರವಾಡಗಳಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳಿಂದ ನಡೆಯಿತು.ಹೀಗೆ ನಡೆದ ಪ್ರಕ್ರಿಯೆಯು ಮಕ್ಕಳ ಸಾಹಿತ್ಯದ ರಚನೆಗಳಿಗೆ ಸಾರ್ವತ್ರಿಕತೆಯನ್ನು ಒದಗಿಸಿಕೊಟ್ಟಿತು.ಸಾಹಿತ್ಯದ ಎಲ್ಲ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕೆ ಇದೆ.ಸರಳವಾದ ಶಬ್ದ,ಪದಗಳ ಪುನರುಕ್ತಿ,ಲಯಗಾರಿಕೆ,ಪ್ರಾಸ,ನಾಟಕೀಯ ಸಂಭಾಷಣೆ ಮುಂತಾದ ಲಕ್ಷಣಗಳನ್ನು ಪಡೆದುಕೊಂಡಿರುವ ಮಕ್ಕಳ ಸಾಹಿತ್ಯ ಪ್ರಧಾನವಾಗಿ ಮಕ್ಕಳಲ್ಲಿ ಜ್ಞಾನದಾಹವನ್ನು ತಣಿಸಿ ಸೃಜನಾತ್ಮಕತೆಯನ್ನು ,ಕಲ್ಪನಾಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ.
ಮಕ್ಕಳ ಸಾಹಿತ್ಯವನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಬಹುದು.
1.ಶಿಶು ಪ್ರಾಸದ ರಚನೆಗಳು : ಮೂರರಿಂದ ಆರು ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರಾಣಿ ,ಪಕ್ಷಿಗಳ ಬಗ್ಗೆ ಕುತೂಹಲವಿರುತ್ತದೆ.ಮಗು ತನ್ನ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯಿಸಿಕೊಳ್ಳುವ ಪರಿಯೇ ಬೆರಗು ಹುಟ್ಟಿಸುತ್ತದೆ.ಇಂಥಲ್ಲಿ ನಮ್ಮ ರಚನೆಗಳು ಪುಟ್ಟ ಪುಟ್ಟ ಸಾಲುಗಳ ಮೂಲಕ ಮಗುವಿನ ಮನಸ್ಸನ್ನು ಸೆಳೆದುಕೊಳ್ಳುವಂತೆ ಇರಬೇಕಾಗುತ್ತದೆ. ‘ಒಂದು ಎರಡು ಬಾಳೆಲೆ ಹರಡು.’, ‘ನನ್ನಪಾಟಿ ಕರಿಯದು ಸುತ್ತು ಕಟ್ಟು ಬಿಳಿಯದು’,‘ಬೇಬಿ ಬೇಬಿ ಸಣ್ಣಾಕಿ’,’ಬಸ್ಸು ಬಂತು ಬಸ್ಸು’..ಇಂಥ ಮೊದಲಾದ ರಚನೆಗಳನ್ನು ಮಕ್ಕಳು ಅಭಿನಯದ ಮೂಲಕ ಕಲಿಯುವ ಪರಿ ಚೈತನ್ಯದಾಯಕವಾಗಿದೆ.ಇಂಥಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸುವುದು ಕೇವಲ ಗಿಳಿ ಪಾಠ ಮಾತ್ರವಾಗಿ ಬಿಡುತ್ತದೆ.ಈ ಅಪಾಯವನ್ನು ಮೀರಿ ನಮ್ಮ ಸಾಹಿತಿಗಳು ಬರೆಯಬೇಕಾಗಿದೆ.
2. ಅತಿಮಾನುಷ ಕಥೆಗಳು : ಆರರಿಂದ ಒಂಬತ್ತು ವರ್ಷದ ಎಳೆಯ ಮಕ್ಕಳು ಸಾಹಸ,ಚಮತ್ಕಾರಿಕ ಮತ್ತು ನೀತಿದಾಯಕ ಕಥನ ಗೀತೆ,ಕಥೆಗಳಿಗೆ ಮಾರುಹೊಗುತ್ತಾರೆ.ಇಂಥ ರಚನೆಗಳಿಗೆ ಆಕರ್ಷಿತರಾಗುತ್ತಾರೆ.ಅಜ್ಜಿಯ ಕಥೆಗಳು,ಕುತೂಹಲ ತಣಿಸುವ ರಂಜನೀಯ ಕಥೆಗಳು,ಅತಿಮಾನುಷ ಕಥೆಗಳು ಈ ಬಗೆಯ ರಚನೆಗಳ ಮೂಲಕ ಮಕ್ಕಳು ಹೊಸದೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ.ಪ್ರಾಣಿ ,ಪಕ್ಷಿಗಳ ಸಾಹಸ ಕಥೆಗಳು,ಕಣ್ಣಿಗೆ ಕಾಣದ ಲೋಕದ ಜನರ ಚಮತ್ಕಾರಗಳು ಈ ವಯಸ್ಸಿನ ಮಕ್ಕಳಿಗೆ ಬೇಕು.ರೋಚಕ ರಚನೆಯ ಸಾಹಿತ್ಯ ನಮ್ಮ ಮಕ್ಕಳ ಸಾಹಿತಿಗಳಿಂದ ಹೆಚ್ಚಾಗಿ ಬರಬೇಕಾಗಿದೆ.
3.ಮೌಲ್ಯಾಧಾರಿತ ರಚನೆಗಳು : ಒಂಬತ್ತರಿಂದ ಹದಿಮೂರು ವರ್ಷ ವಯಸ್ಸಿನ ಮಕ್ಕಳು ಅಕ್ಷರ ಬಲ್ಲವರು ಹಾಗೂ ಒಂದಿಷ್ಟು ತಿಳುವಳಿಕೆ ಉಳ್ಳವರೂ ಆಗಿರುತ್ತಾರೆ.ಇಂಥ ಮಕ್ಕಳಿಗೆ ಸ್ನೇಹ,ಸಹಕಾರ,ರಾಷ್ಟ್ರಪ್ರೇಮ,ಗೌರವ, ಪ್ರಾಮಾಣಿಕತೆ ಮೊದಲಾದ ಮೌಲ್ಯ ಬಿತ್ತುವ ರಚನೆಗಳು ಬೇಕು.ಜೊತೆಗೆ ಚಾರಿತ್ರಿಕ.ಪೌರಾಣಿಕ,ಮಹಾಪುರುಷರ ಕಥೆಗಳು ,ವೈಜ್ಞಾನಿಕ ಅದ್ಭುತಗಳು,ಸಮಕಾಲೀನರ ಸಾಹಸಗಳು ಮೊದಲಾದ ಸಂಗತಿಗಳ ಕಡೆ ಈ ವಯೊಮಾನದ ಮಕ್ಕಳು ಆಕರ್ಷಿತರಾಗುತ್ತಾರೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ.
ಇಂಥ ಮೊದಲಾದ ರಚನೆಗಳು ಈ ವಯೋಮಾನದ ಮಕ್ಕಳಿಗೆ ಅರ್ಥವಾಗುವುದರೊಂದಿಗೆ,ತುಂಬಾ ರುಚಿಸುತ್ತವೆ.ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಆಸಕ್ತಿಗಳು ಇರುವುದರಿಂದ ಅವರ ಗ್ರಹಣ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಬರೆಯಬೇಕಾದ ಅನಿವಾರ್ಯತೆ ಮಕ್ಕಳ ಸಾಹಿತಿಗಳದ್ದಾಗಿರುತ್ತದೆ. ಮಕ್ಕಳ ಮನಸ್ಸು ಬಾಯಿ ತೆರೆದ ಖಾಲಿ ಬುಟ್ಟಿ ಅದರಲ್ಲಿ ಕಸ ತುಂಬದೇ ರಸ ತುಂಬುವ ಕೆಲಸ ಮಾಡಬೇಕಾದ ಜವಾಬ್ದಾರಿ ಮಕ್ಕಳ ಸಾಹಿತಿಗಳಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ಇವತ್ತು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ.ಹೊಸ ಭಾವ ಹೊಸ ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ, ವಿಜ್ಞಾನ, ವೈದ್ಯಕೀಯ ,ಪರಿಸರ, ಆಕಾಶ ,ಗ್ರಹಣಗಳು, ಕಂಪ್ಯೂಟರ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯವನ್ನು ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ. ಯಾವುದೇ ಮಗು ಅರ್ಧ ಬೆಳೆದ ಮನುಷ್ಯನಲ್ಲ ಮಕ್ಕಳು ಅವರಷ್ಟಕ್ಕೆ ಪರಿಪೂರ್ಣ ವ್ಯಕ್ತಿಗಳು. ಕಾರಣ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನ ಶೀಲರಾಗುವಂತೆ ಮಾಡುವ ಮತ್ತು ತಮ್ಮ ಸುತ್ತಲ ಪ್ರಪಂಚವನ್ನು ಅರಿಯುವಂತೆ ಮಾಡುವ ಯಾವುದೇ ಬರವಣಿಗೆಯೂ ಮಕ್ಕಳ ಸಾಹಿತ್ಯವೆನಿಸಿಕೊಳ್ಳುತ್ತದೆ.ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರಿಕರಾಗಿರುವ ಮಕ್ಕಳು ತಾನೇ ಹೊರಬೇಕು.ಅದಕ್ಕೆ ಸಜ್ಜುಗೊಳಿಸುವ ಸಾಹಿತ್ಯ ಮಕ್ಕಳ ಸಾಹಿತ್ಯವಾಗಿರುವುದು ಅತ್ಯಂತ ಮುಖ್ಯವಾಗಿದೆ.ಆದರೆ ಒಂದು ಅನುಮಾನ ಇನ್ನು ಮುಂದಿನ ದಿನಮಾನಗಳಲ್ಲಿ ಬರಬಹುದಾದ ಬದಲಾವಣೆಗಳು ನಮ್ಮ ಉಹೆಗೂ ನಿಲುಕದಿರುವದರಿಂದ ನಾವು ನಮ್ಮ ಮಕ್ಕಳನ್ನು ಯಾವ ಭವಿಷ್ಯತ್ತಿಗೆ ತಯಾರು ಮಾಡಬಹುದು? ಎಂಬ ಪ್ರಶ್ನೆ ಮಕ್ಕಳ ಸಾಹಿತಿಗಳನ್ನು ಕಾಡದೇ ಇರಲಾರದು.
====================================================================
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟಮೊ.9845500890
ಭಾನುವಾರ, ಮೇ 19, 2013
ಕನ್ನಡ ಜನಪದ ಒಗಟುಗಳು -ಡಾ.ಪ್ರಕಾಶ ಗ.ಖಾಡೆ
ಕನ್ನಡ ಜನಪದ ಒಗಟುಗಳು
-ಡಾ.ಪ್ರಕಾಶ ಗ.ಖಾಡೆ
.
ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಒಗಟು ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ. ಇಂಗ್ಲೀಷಿನಲ್ಲಿ ಇದಕ್ಕೆ ‘ಖiಜಜಟe’ ಎಂದು ಹೆಸರಿದೆ. ಇದು ಹಳೆಯ ಇಂಗ್ಲೀಷಿನ ‘ಖಚಿeಜಚಿಟಿÀ’ ಪದದಿಂದ ಬಂದದ್ದು. ಇದರ ಅರ್ಥ ‘ಣo give ಚಿಜviಛಿe ’ ಎಂದು. ಕನ್ನಡದಲ್ಲಿ ಒಗಟು, ಒಂಟು, ಒಡಪು, ಒಡಗತೆ ಮುಂತಾದ ಪದಗಳು ಬಳಕೆಯಲ್ಲಿವೆ. ಒಗೆ ಅಥವಾ ಎಸೆ ಣo ಣhಡಿoತಿ ಎಂಬರ್ಥದಲ್ಲಿ ಒಗಟು, ಒಡೆ-ಒಡೆಸು, ಬಿಡಿಸು ಎಂಬರ್ಥದಲ್ಲಿ ಒಗಟು ಬಳಕೆಯಲ್ಲಿದೆ.
ಒಗಟು ಎಂದರೆ ಜಟಿಲವಾದದ್ದು, ಗೋಜಲು ಗೋಜಲಾದದ್ದು, ಗೂಢವಾದದ್ದು ಎಂದು ಅರ್ಥೈಸಲಾಗುತ್ತಿದೆ. ಒಗಟುಗಳು ಒಗಟುಗಳು ಬುದ್ಧಿ ಪ್ರಧಾನವಾದವುಗಳು. ಇವು ಸಾಮಾನ್ಯವಾಗಿ ಊಹೆಯ ಮೇಲೆ ಉತ್ತರವನ್ನು ಹುಡುಕುವ, ಕೇಳಿದ ಕೂಡಲೇ ದಿU್ಪ್ಭ್ರಮೆ ಹಿಡಿಸುವ, ರಹಸ್ಯಾರ್ಥವುಳ್ಳ ಪ್ರಶ್ನಾರ್ಥಕ ಹೇಳಿಕೆಗಳು. ಪ್ರತಿಯೊಂದರಲ್ಲೂ ಸಮಸ್ಯೆಯೊಂದಿದ್ದು ಸುಲಭವಾಗಿ ಬಿಡಿಸಲಾರದ ರೀತಿಯಲ್ಲಿ ಸಂಯೋಜಿತವಾಗಿರುತ್ತವೆ. ಇದರಲ್ಲಿ ಒಡ್ಡಿದ್ದು ಒಂದಿದ್ದರೆ, ಒಡೆಸುವುದು ಮತ್ತೊಂದು ಇರುತ್ತದೆ.
“ಒಗಟು ಅತ್ಯಂತ ಪ್ರಾಚೀನವಾದ ಮತ್ತು ವ್ಯಾಪಕವಾದ ಸೂತ್ರೀಕೃತ ಆಲೋಚನಾ ಪ್ರಕಾರಗಳಲ್ಲಿ ಒಂದಾಗಿದ್ದು ಈ ವಿಷಯದಲ್ಲಿ ಪುರಾಣ, ನೀತಿಕಥೆ, ಜನಪದ ಕಥೆ ಮತ್ತು ಗಾದೆಗಳಿಗೆ ಇದು ಸಮಾನವಾಗಿದೆ. ಒಗಟುಗಳು ಮೂಲತಃ ರೂಪಕಗಳು. ಈ ರೂಪಕಗಳು ಮೂಲ ಮಾನಸಿಕ ಪ್ರಕ್ರಿಯೆಗಳಾದ ಸಂಯೋಜನೆ, ತುಲನೆ, ಹೋಲಿಕೆ ಮತ್ತು ಮೌನಗಳ ಗ್ರಹಿಕೆಯ ಫಲ.” ಒಗಟಿಗೆ ಹೆಚ್ಚು ಶಕ್ತಿಯನ್ನು, ಆಕರ್ಷಣೆಯನ್ನು ತಂದಿರುವುದೆಂದರೆ ಈ ರೂಪಕವೇ. “ಅಲಂಕಾರಿವಾದ ಒಗಟು ರೂಪಕದೊಡನೆ ಅತ್ಯಂತ ಸಂಬಂಧವನ್ನು ಒಳಗೊಂಡಿದೆ. ಒಂದು ದೃಷ್ಟಿಯಲ್ಲಿ ಒಗಟು ಹಾಸ್ಯದ ಫಲ, ಮತ್ತೊಂದು ದೃಷ್ಟಿಯಲ್ಲಿ ಪ್ರಕೃತಿಯಲ್ಲಿ ಸಾದೃಶ್ಯವನ್ನು ಕಾಣುವ ಮನುಷ್ಯ ಸಾಮಥ್ರ್ಯದ ಫಲಿತಾಂಶ. ಊಹೆಯಿಂದ ಬಿಡಿಸಬೇಕಾದ ಸಂದಿಗ್ಧಮಯವಾದ ಹೇಳಿಕೆ. ಇದು ರೂಪಕ ಮೂಲ. ಎರಡು ವಸ್ತುಗಳ ತರ್ಕಬದ್ಧ ಸಮೀಕರಣೆ. ಜೇಮ್ಸ ಎ. ಕೆಲ್ಸೋನ ಈ ಹೇಳಿಕೆಯು ಮಾನವನಲ್ಲಿ ಸಹಜವಾಗಿಯೇ ಇರುವ ಹಾಸ್ಯ ವಿಡಂಬನೆಗಳು ಒಗಟಿನ ರಚನೆಗೆ ಕಾರಣವಾಗಿವೆ ಎಂಬುದನ್ನು ಸಾಧಿಸುತ್ತದೆ. ಮೇಲುನೋಟಕ್ಕೆ ಕೆಲವು ಒಗಟುಗಳು ಅಶ್ಲೀಲವಾಗಿ ಕಾಣುತ್ತವೆ. ಕ್ಷೇತ್ರ ಕಾರ್ಯದಲ್ಲಿ ಇಂಥ ಒಗಟುಗಳನ್ನು ಹೇಖುವ ಸಂದರ್ಭದಲ್ಲಿ ಜನಪದರಲ್ಲಿ ಯಾವ ಮುಜುಗರವು ತೋರದಿರುವದು ಅವುಗಳ ಉತ್ತರದಲ್ಲಿರುವ ಪರಿಶುದ್ಧತೆಯೇ ಕಾರಣವಾಗಿದೆ. ಇಲ್ಲಿ ಬರುವ ಪದಗಳು ಅಶ್ಲೀಲವಾಗಿದ್ದರೂ, ಅದರ ಉತ್ತರ ಮತ್ತು ಒಳ ಅರ್ಥ ಅತ್ಯಂತ ಶುದ್ಧವಾಗಿರುತ್ತದೆ. ಇಂಥ ಸಮಯದಲ್ಲಿ ಶೀಲಕ್ಕೂ, ಅಶ್ಲೀಲಕ್ಕೂ ಗೆರೆ ಎಳೆಯುವುದು ಬಹಳ ಕಷ್ಟದ ವಿಷಯ.
“ಬಹುತೇಕ ಒಗಟುಗಳು ಭಾಷೆ ಹಾಗೂ ಸಾಹಿತ್ಯ ಸೌಂದರ್ಯದ ಅಶಂಗಳನ್ನು ರೂಢಿಸಿಕೊಂಡ ಹೇಳಿಕೆಗಳಾಗಿವೆ. ಒಗಟು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಫಲವಾಗಿz.É” ಆದಿವಾಸಿಗಳ ಬಾಳಿನಲ್ಲಿ ಪ್ರಕೃತೆಯ ಪಾತ್ರ ಮಹತ್ತರವಾದುದು. ಪ್ರಕೃತಿಗೂ ಮಾನವನಿಗೂ ಇದ್ದ ನಿಕಟ ಸಂಪರ್ಕದ ಫಲವಾಗಿ ಒಗಟು ಸೃಷ್ಟಿಯಾಗಿರಬೇಕು. ಒಗಟಿನಲ್ಲಿ ಕಾಣಬರುವ ಅನೇಕ ಪ್ರಕೃತಿಪರ ವಸ್ತು ಚಿತ್ರಗಳೇ ಇದಕ್ಕೆ ಸಾಕ್ಷಿ.
ಎಲ್ಲಾ ಕಾಲದಾಗ ಹಸಿರ ಇರತೈತಿ (ಗಿಳಿ)
ಕೆಂಪ ಹುಡುಗ ಹಸಿರು ಟೊಪ್ಪಿಗಿ (ಕೆಂಪು ಮೆಣಸಿನಕಾಯಿ)
ಒಗಟುಗಳು ಸಾಮಾನ್ಯವಾಗಿ ಕಾವ್ಯರೂಪದಲ್ಲಿರುತ್ತವೆ. ಬುದ್ಧಿಯ ಕೌಶಲ್ಯವನ್ನು ಒರೆಗೆ ಹಚ್ಚಿ ನೋಡುವ ಇವುಗಳ ಹಿನ್ನೆಲೆಯಲ್ಲಿ ವಿಶಿಷ್ಠವಾದ ಕವಿಯ ಮನೋಧರ್ಮದ ಮಿಡಿತವನ್ನು ಕಾಣಬಹುದು. ಒಂದು ಅರ್ಥದಲ್ಲಿ ಒಂದೊಂದು ಒಗಟೂ ಪುಟ್ಟ ಭಾವಗೀತೆ” .. ಒಟ್ಟಾರೆ ಒಗಟು ಸಂಕ್ಷಿಪ್ತ ರೂಪದ ಒಂದು ಆಕರ್ಷಕ ರಚನೆ.
ಒಗಟುಗಳು ಸಾಹಿತ್ಯಿಕ ಮೌಲ್ಯವನ್ನು ಒಳಗೊಂಡ ಜನಪದ ಸಾಹಿತ್ಯದ ಶ್ರೇಷ್ಠ ರಚನೆಗಳಾಗಿವೆ. ಒಗಟು ಪರಿಭಾವಿಸಿದಷ್ಟೂ ಅರ್ಥಪರೆ ಬಿಚ್ಚಿಕೊಳ್ಳುವ ಗುಣವಿಷೇಶದಿಂದ, ಶ್ರೇಷ್ಠ ಕಾವ್ಯದ ನಿಲುವಿಗೇರುವ ಅಂಶಗಳನ್ನೂ ಹೊಂದಿದೆ. ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಒಗಟು ರೂಪಕ ಮೂಲವಾದದ್ದೆಂಬುದು. ಈ ಗುಣದಿಂದಲೇ ಅದು ಧ್ವನಿಪೂರ್ಣವಾಗುತ್ತದೆ. ಧ್ವನಿ ಸಂಕ್ಷಿಪ್ತತೆಗೆ ಸಾಧನವಾದ ಸಾಂಕೇತಿಕತೆಯನ್ನು ಅರಸುತ್ತದೆ. ಹೀಗೆ ಸಾಂಕೇತಿಕತೆಯಲ್ಲಿ ಅಭಿವ್ಯಕ್ತಿಗೊಂಡ ಸಂಕ್ಷಿಪ್ತ ಕಾವ್ಯವೇ ಒಗಟು”
ಚಿಕ್ಕ ಚಿಕ್ಕ ಹೋರಿ ಚಿಲಾರಿ ಹೋರಿ
ಸಂಜೀಕ ಬರತೈತಿ ಕಿಲಾರಿ ಹೋರಿ (ಕೌದಿ)
ಓಡತೈತಿ ಕಾಲಿಲ್ಲ
ಒತ್ತತೈತಿ ತೋಳಿಲ್ಲ (ದಿನ)
ಭಾವ ಹೆಪ್ಪುಗಟ್ಟಿ ಗೀತೆಯಾಗುವಂತೆ, ಭಾವ ಬುದ್ಧಿಗಳ ರಸಾಯನದಿಂದ ಗಾದೆಯಾಗುವಂತೆ, ಬುದ್ಧಿ ಹರಳಗೊಂಡು ಒಗಟಾಗುತ್ತದೆ. “ಪ್ರಾಚೀನವಾದ ಜನಪದ ಸಂಸ್ಕøತಿ ಬುದ್ಧಿ ಪ್ರತಿಭೆಗಳ ಸಂಯೋಜಿತ ಸೃಷ್ಟಿಯಾದ ಸೌಚಿದರ್ಯ, ಕಾರ್ಯಕಾರಣ ತರ್ಕಶಕ್ತಿಗಳನ್ನೊಳಗೊಂಡ, ಸಿಪ್ಪೆ ಸುಲಿಯುತ್ತಾ ತಿರುಳಿನೆಡೆಗೆ ಸೆಳೆದೊಯ್ಯುವ ಅರ್ಥಾಪೇಕ್ಷಿಯಾದ ಪದಚಕ್ರವ್ಯೂಹವೇ ಒಗಟು.”
ಒಗಟು ಎಲ್ಲ ವಯೋಮಾನದವರಲ್ಲೂ ಉಳಿದುಕೊಂಡು ಬಂದಿವೆ. ಮಕ್ಕಳು, ಹಿರಿಯರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಇವನ್ನು ಬಳಸುತ್ತಾರೆ. ಪ್ರಾಚೀನ ಕಾಲದಿಂದಲೂ ಮಾನವ ಮನಸ್ಸು ತನ್ನ ಸುತ್ತಲಿನ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಿಂದಾಗಿ ಒಗಟುಗಳು ಹುಟ್ಟಿಕೊಂಡಿವೆ. ಎಲ್ಲ ವಿಧದ ಸಾಮರಸ್ಯಯುಕ್ತತೆ, ಅಸಂಬದ್ಧತೆಗಳೂ ಮಕ್ಕಳು ಮತ್ತು ಮಕ್ಕಳಂಥ ಮನುಷ್ಯರ ಗಮನ ಸೆಳೆಯುತ್ತವೆ. ಆದ್ದರಿಂದಲೇ ಒಗಟುಗಳು ಮಕ್ಕಳಿಗೆ ಪ್ರಿಯ. ಒಗಟುಗಳು ಮಾನಸಿಕ ಶೈಶವಾವಸ್ಥೆಯ ನಿಗೂಢತೆಗಳೂ ಹೌದು. ವಿವೇಚನೆಯೂ ಹೌದು. ನಾಗರಿಕತೆ ಮುಂದುವರೆದಂತೆ ಅವು ಇನ್ನೂ ಜೀವಂತವಾಗಿ ಉಳಿದಿವೆ. ಸರಳವಾದ ಹೋಲಿಕೆಗಳು ಶ್ಲೇಷಗಳಾದಂತೆ ಅವುಗಳಲ್ಲಿಯ ಆಸಕ್ತಿ ಮಸುಕಾಗುತ್ತಾ ಅಳಿಸುತ್ತಾ ಬಂದಂತೆ ಒಗಟುಗಳು ಮತ್ತಷ್ಟು ಸಂಕೀರ್ಣವೂ, ಪ್ರಜ್ಞಾಪೂರ್ವಕವೂ ಆಗುತ್ತವೆ” ಎಂಬುದು ಒಗಟುಗಳ ಸರ್ವಕಾಲಿಕ ಶ್ರೇಷ್ಠತೆಯನ್ನು ಸಾರುತ್ತದೆ. # (ಕೃಪೆ : ಅವಧಿ)
======================================================================
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890
ಕಥೆ : ಭೂಮಿ ತಲ್ಲಣಿಸ್ಯಾವ -ಡಾ.ಪ್ರಕಾಶ ಗ.ಖಾಡೆ
ವಿಜಯ ಕರ್ನಾಟಕ ವಿಜಯ next 23 ಮೇ 2013 ರ ಸಂಚಿಕೆಯಲ್ಲಿ ಪ್ರಕಟವಾದ ಕಥೆ .
"ಭೂಮಿ ತಲ್ಲಣಿಸ್ಯಾವ ..."
- ಡಾ. ಪ್ರಕಾಶ. ಗ. ಖಾಡೆ,ಬಾಗಲಕೋಟ
"ಅನ್ನೇ ಇದ್ದರ ಮುಳಗತದ ಪುಣ್ಣೇ ಇದ್ದರ ತೇಲತದ" ಅನಕೊಂತ ಸಿದ್ದಪ್ಪಜ್ಜ ತನ್ನ ತೆಲಿಮ್ಯಾಗಿನ ಪಟಗಾ ಕೈಗಿ ತುಗೊಂಡು ಬೀಸಿ ಹೇಳಿ ಹ್ವಾದ. ಇವ ಹೀಂಗ ಅನಕೊಂತ ಹ್ವಾದ ಮ್ಯಾಲ ಕೂಡಿದ ಮಂದಿ ಏನೇನೋ ಗೊಣಗಿಕೊಂತ ಒಬ್ಬಬ್ಬರ ಎದ್ದಹ್ವಾದ್ರು. ಆದ್ರ ಕಡೀಕ ಕಟ್ಟಿಮ್ಯಾಲ ಉಳಿದ ಒಬ್ಬನ ಸತ್ಪುರುಷ ಸ್ವಾಮಿ ಏಳಲಾರದ ಅಲ್ಲೇ ಕುಂತು ಸಿದ್ದಪ್ಪಜ್ಜನ ಮಾತು ಮತ್ತ ಮತ್ತ ಮೆಲಕ ಹಾಕಾಕ ಹತ್ತಿದಾ.
ಹೌದಲ್ಲ ನಾನೂ ನೋಡ್ತ ಇಷ್ಟ ವರ್ಷ ಕಳಿದೆ, ಈ ಊರ ಅನ್ನೋದು ಮೊದಲ ಹ್ಯಾಂಗಿತ್ತು. ಈಗ ನೋಡಿದರ ಕಾಣುದೆಲ್ಲಾ ಬರೀ ಕಲ್ಲು ಕಲ್ಲು. ನಾ ಊರಿಗಿ ಬಂದಾಗ ಎಷ್ಟು ಹಸಿರಿತ್ತು, ಎಷ್ಟ ನೀರಿತ್ತು, ಏನ ಸೊಗಸಿತ್ತು. ಗುಬ್ಬಿ ಗ್ವಾಳೆ ಆಗಿ ಓಣಿ ತುಂಬ ಚೆಲ್ಲಿದ ಕಾಳು ತಿಂದು ಕುಣಕೊಂತ ಹಾರಾಡತ್ತಿದ್ದವು ಊರತನಾ ನವಿಲಗೋಳ ಬಂದು ಕುಣಿಕುಣಿದ ಹೋಗತಿದ್ವು. ಊರ ಬಾಜೂ ಒಟ್ಟಿದ ಬಣವಿಗಳ ಮ್ಯಾಲ ಅವುಗಳ ನರ್ತನ ನೋಡೋದ ಬಂದ ಛಂದ. ಛೇ ಈಗ ಎಲ್ಲಾ ಎಲ್ಲೇತಿ? ಸೇದು ಬಾವ್ಯಾಗ ತಳದಾಗ ನೀರ ಎಷ್ಟ ಸ್ವಚ್ಛ ಇರತಿದ್ದವು. ಕೆಳಗಿನ ಮೀನು, ಆಮಿ ಹ್ಯಾಂಗ ಹೊಳಪಿಂದ ಕಾಣತಿದ್ದವು. ಈಗ ಏನ ಆಗೇತಿ, ಸೇದು ಭಾವಿ ಕಲ್ಲು, ಮಣ್ಣು, ಕಸಕಡ್ಡಿ ತುಂಬಿ ಹಾವು ಚೇಳಿನ ಗೂಡ ಆಗೇತಿ. ಸೇದು ಗುಂಡದಾಗ ಎಷ್ಟ ಚೆಂದ ಸೆಲಿ ಉಕ್ಕಿ ಬರತಿತ್ತು. ಎಂಥಾ ತಿಳಿನೀರ. ತೆಂಗಿನ ತಿಳಿನೀರಕ್ಕಿಂತ ಗುಡ್ಡದಾನ ಸೆಲಿಯಿಂದ ಬರೋ ನೀರ ಎಷ್ಟ ಸವಿ. ಈಗ ಸೇದುಗುಂಡ ಎಲ್ಲೈತಿ ಅಂತಾ ಹುಡುಕಬೇಕಾಗೇತಿ. ವರ್ಷಾ ತುಂಬಿ ಹರೀತಿದ್ದ ಹಳ್ಳ, ಗಂಗಾಮಾತಾ ಗುಡಿ ಹಿಂದಿನ ದಬದಬಿ, ಸೋಪಾನ ಕಟ್ಟಿ ಮುಂದಿನ ಆಳವಾದ ನೀರಿನ ಹೊಂಡ, ಸುತ್ತ ಹಬ್ಬಿದ ಹಸಿರ ಸೊಬಗ ಈಗ ಎಲ್ಲಾ ಎಲ್ಲಿ ಹ್ವಾದವೋ..... ಹೀಂಗ ಅನಕೊಂತ ಸತ್ಪುರುಷ ಸ್ವಾಮಿ ಮುಗಿಲ ನೋಡಕೊಂತ ಕುಂತ. ಮತ್ತ ಮತ್ತ ಅವನ ಮನಸ್ಸಿನ್ಯಾಗ ಸಿದ್ದಪ್ಪಜ್ಜ ಹೇಳಿ ಹೋದ ಮಾತ ಕಟಿಯಾಕ ಚಾಲೂ ಮಾಡಿತು. "ಅನ್ನೇ ಇದ್ದರ......"
ಈ ಮಣ್ಣು ಈ ಗಾಳಿ ಈ ನೀರು ಹಿರಿಯಾರ ತಲೆಮಾರಿನಿಂದ ಮುಕ್ತವಾಗಿತ್ತು .ಈಗ ಏನಾಗೇತಿ ನೀರು ಗಾಳಿ ಮಾರೋದು ಬಂದೈತಿ.ಊರ ಹಳ್ಳದಾಗ ತಿಳಿನೀರ ತೆರಿ ಒಡದ ನೀರ ತರೋ ಖುಷಿ ಈಗ ಎಲ್ಲೈತಿ.ನಳಕ್ಕ ಪಾಳಿ ಹಚ್ಚಿ ಬೆಳತಾನ ನಿಂದ್ರು ಬದಲಿ ರೂಪಾಯಿ ಹಾಕಿ ನೀರ ತುಂಬಿಕೊಳ್ಳುದು ಬಂದೈತಿ.ಎಲ್ಲಾ ದುಡ್ಡಿನ ಮ್ಯಾಲ ನಿಂತೈತಿ. ಮನಿ ಮನಿಗಿ ಮಜ್ಜಿಗಿ ಹಂಚಿ ಉಣ್ಣೋ ಕಾಲ ಹೋಗಿ ಮಜ್ಜಿಗಿ ಮಾರೋದು ಬಂದ ಮ್ಯಾಲ ಈಗ ನೀರ ಕೊಳ್ಳೋ ಗತಿ ಬಂದೈತಿ .ಎಂಥಾ ಕಾಲ ಬಂತು. ಈ ಭೂಮಿ ಮ್ಯಾಗ ಎಷ್ಟ ಅನ್ನೇ ಆಗಿಲ್ಲ, ನ್ಯಾಯ ಅನ್ನೋದು ಜಗದಾಗ ಬೆಂಕಿಯಾಗಿ ಉರದ ಹೋಗಿರೊ ಬೂದಿ ಆಗೇತಿ. ಬೂದಿನ ಫ್ಯಾಕ್ಟರಿಗೆ ಕಳಿಸಿ ಮತ್ತ ಮೊದಲಿನಂಗ ಮಾಡ್ರಿ ನೋಡೋಣಂತ ಯುನಿವರ್ಸಿಟಿ ಆಧ್ವಾನ ಪ್ರೊಫೆಸರ್ಗಳಿಗೆ ಬುಲಾವ ಹೋಗಿದ್ದ ಸಂಗತಿ ಟಿ.ವ್ಹಿ.ಯವರು ಲೈವ್ ಇಟ್ಟು ಒಂದ ಸವನ ಬಿತ್ತರಿಸಲಾಕ ಹತ್ಯಾರ. ನೋಡವರ ಸಹಿತ ಫೋನ್ ಮಾಡಿ ಭಾಗವಹಿಸಬೇಕಂತ ಹೇಳಿದಮ್ಯಾಲ, ಇದಕ್ಕಾಗಿನ ಖಾಲಿ ಕುಂತ ಮಂದಿ ತಮ್ಮದೂ ಅನಿಸಿಕಿ ಹಂಚಗೊಂಡ, ಬಂತ ನೋಡ್ರಿ ನಂದೂ ಮಾತ ಅಂತ ಸಂಜೀಮುಂದ ಕೂಡಿದ ಗೆಳೆಯರಿಗಿ ಬಾರಿಗಿ ಕರಕೊಂಡ ಹೋಗಿ ಪಾರ್ಟಿ ಕೊಟ್ಟಾರ.
ಪಾರ್ಟಿಯೊಳಗ ಕಂಠಮಟ ಕುಡದ ಗೆಳೆಯಾರು ದೇಶದ ಕಥಿ, ದೇಶದಾಗ ಇರೋ ರಾಜಾನ ಕಥಿ, ರಾಜಾನ ಮಂದಿ ಮಕ್ಕಳು ಹಳ್ಳಿಮಂದಿಯ ಕೌದಿ ತುಡುಗಮಾಡಿ ಬಗಲಾಗ ಸುತಗೊಂಡ ಹೋದ ಕಥಿ, ಕೌದ್ಯಾಗ ನೂರ ತೂತು ಬಿದ್ದು ತುಂಬಿಕೊಂಡಿದೆಲ್ಲಾ ಸೋರಿ ಹೋಗಿ ಯಾರೇರ ಬಳಕೋಳ್ರಿ ಅನ್ನೋ ಕಥಿ, ಬಳಕೊಂಡವರು ಬಡವರಲ್ಲಾ ಸಾವ್ಕಾರ ಅನ್ನೋ ಕಥಿ, ಸಾವ್ಕಾರ ಮತ್ತ ಸಾವ್ಕಾರ ಆಗೋದು ಬಡವರು ಬಡವರಾಗೇ ಸಾಯೋ ಕಥಿ, ಸಾವ್ಕಾರು ಯುದ್ಧ ಸಾರತಾರ ಬಡವರು ಬಡಿದಾಡಿ ಸಾಯ್ತಾರ ಅನ್ನೋ ಕಥಿ ,ಒಂಟಿ ಹೆಣಮಕ್ಕಳ ಮ್ಯಾಲ ನೀಚ ಮಂದಿ ಕಣ್ಣ ಹಾಕಿದ ಕಥಿ,ನೋಡ ನೋಡತ ದೊಡ್ಡ ಮಠಾ ಕಟ್ಟಿದ ಸ್ವಾಮಿಗೋಳ ಕಾಮದ ಕಥಿ, ದೊಡ್ಡ ಮಂದಿ ಅನಿಸಿಕೊಂಡವರು ಜೇಲಿಗಿ ಹೋಗಿ ಬಂದು ಲಜ್ಜಿಗೆಟ್ಟು ತಿರುಗೋ ಕಥಿ ಹೀಂಗ ಎಲ್ಲ ಹೇಳಿ, ಕೊನಿಗೆ ಬಿಲ್ಲ ಕೊಡುವಾಗ ಕಿಸೆದಾಗ ಉಳಿದ ಎಲ್ಲಾರದು ದುಡ್ಡ ಗ್ವಾಳೆ ಮಾಡಿ ಮಾಲಕಗ ಕೊಟ್ಟ ಹೊರಗ ಬಂದು ನಿಂದ್ರುದಾಗ ಜಗತ್ತ ಕತ್ತಲಾಗಿ, ಚಿಕ್ಕಿ ಉದುರಿ ಬಿದ್ದು ಬೆಂಕಿಯಾಗಿ ಅಲ್ಲಲ್ಲಿ ಹೊತಗೊಂಡ ಉರಿಯೋ ಕಬ್ಬಿನ ಪಡಾ, ಸುಟ್ಟ ಬಣವಿ, ಸುಟ್ಟ ಬದಕ ಹೀಂಗ ತೆಲಿ ಒಂದ ಸವನ ಗಿರಿಮಿಟ್ಲಿಗತೆ ತಿರುಗಿ ತಿರುಗಿ ಸ್ವಲ್ಪ ಎಚ್ಚರಾದಾಂಗ ಆಗಿ ಸೀದಾ ನಿಂತರು. ಯಾರು ಯಾವ ಕಡೆ ಹೋಗಬೇಕಂತ ನಿಶೇದಾಗ ಇದ್ರೂ ಗೊತ್ತಾಗಿ ತಮ್ಮ ತಮ್ಮ ಗಾಡಿ ಚಾಲೂ ಮಾಡಿದರು. ನೋಡ ನೋಡತ ಗಪ್ಪ ಆದ್ರು. ಆವತ್ತಿಂದ ಮುಗೀತ ಅನ್ನೋದ್ರಾಗ ಸವಿರಾತ್ರಿ ಯಾವನೋ ಹಾಡಕೊಂತ ಹೊಂಟಿದ್ದ.....
ಸೊಕ್ಕು ಜವ್ವನೆಯರ ಕೂಡಿ ನೀನು
ಅಕ್ಕ ಅವ್ವನೆಂದು ಸವಿ ಮಾತನಾಡಿ
ಅಕ್ಕರದಲಿ ಒಡಗೂಡಿಯೇಕಲೋ ನರ
ಕಕ್ಕೆ ನೀ ಬಿದ್ದು ಕೆಡಬೇಡ.
ಸಟ್ಟಸರಿರಾತ್ರಿ ಈ ಹಾಡ ಯಾಂವಪಾ ಹಾಡಾಂವ ಅಂತ ಸೆಳಿಮಂಚಿ ಏರಿದ ಊರಗೌಡ ಬಿದ್ದನೋ ಎದ್ದನೋ ಅಂತಾ ಧೋತರಾ ಸರಿಮಾಡಿಕೊಂಡ ಕೇರ್ಯಾನ ಮಲಕೊಂಡ ಹಂದಿಗೊಳ ತುಳಕೊಂತ, ಕತ್ತಲದಾಗ ಓಟಾ ಕಿತ್ತು ತನ್ನ ವಾಡೇದ ಬಾಗಿಲಾ ಬಡದ. ಬಾಗಿಲಾ ತಗದಂಗ ಇತ್ತು. ಮಿಣುಕು ಬೆಳಕಿನ್ಯಾಗ ದಡ್ಡೀ ಬಾಗಿಲಾಗಿಂದ ಯಾರೋ ಜಿಗಿದ ಹೋದಾಂಗ ಆತು. ಕಮ್ಮನ್ನ ಹೊನ್ನ ಹೂವಿನ ಸೆಲ್ಲೆ ತೋಯ್ದು ತೊಪ್ಪಿ ಆಗಿತ್ತು. ಇನ್ನಾ ಹಸಿ ಆರೀರಲಿಲ್ಲ. ಗೌಡತಿಗೂ ಗೌಡಗೂ ಬಾಯಿ ಆಗಿ ಯಾರ ಯಾರ ಮ್ಯಾಲ ಏರಿ ಹ್ವಾದ್ರೂ ಕತ್ತಲದಾಗ ಗೊತ್ತ ಆಗಲಿಲ್ಲ. ಹ್ಯಾಂಗೂ ಇಬ್ರೂ ಉಂಡಿದ್ರು, ಸುಮ್ಮನ ಮಲಗಿ ಬಿಟ್ಟರು.
ಚುಮು ಚುಮು ನಸುಕಿನ್ಯಾಗ ಬುಡ ಬುಡಕಿಯವರು ಹಕ್ಕಿ ಪಣಾ ಕಟ್ಟಿದರು.ಚಿಂಚನ್ಹಕ್ಕಿ,ಗೂಗಿ,ಕಾಗಿ,ಹಲ್ಲಿ ಮತ್ತ ಹಾಲಕ್ಕಿ ಹೀಂಗ ಐದೂ ಪಕ್ಷಿ,ಪ್ರಾಣಿಗಳ ಕೂಗ ಕೇಳಕೊಂತ ಹೊಂಟಿದ್ರು.ಬುಡುಬುಡುಕಿ ಸಣ್ಣ ವಾದ್ಯ ನುಡಿಸಕೋತ ಕಂದೀಲ ಬೆಳಕಿನ್ಯಾಗ ಸಾರಿ ಸಾರಿ ಹೇಳಾಕ ಹತ್ತಿದ್ದರು.ಊರ ಗುರತಾ ಈಗ ಮಾಡಕೊಳ್ಳಿರಿ,ನಿಮ್ಮ ಊರ ನಿಮಗ ಸಿಗಾಕಿಲ್ಲ,ಉತ್ತರದ ನೆಲಾ ಉತ್ತಾಕ ಸಿಗಾಂಗಿಲ್ಲ,ಬಿತ್ತೆನೆಂದರ ಬದಕ ಇರಾಂಗಿಲ್ಲ,ಬಂದಿದ್ದ ಬಳಕೊಳ್ಳ್ರಿ,ತಿಂದಿದ್ದ ಖಾರಿಕೊಳ್ಳ್ರಿ..ಅಂತಾ ಶಕುನ ಸಾರಿ ಹ್ವಾದ ಮ್ಯಾಲ ಊರಾನ ಮಂದಿಗಿ ಮುಂಜಾನೆ ಸೂರ್ಯ ಪರಮಾತ್ಮ ಮೂಡೂದ ಕಠಿಣವೆನಿಸ್ತು.ಹರಕ ಕೌದಿ ಝಾಡಿಸಿ ಚಾಪಿ ಮೂಲ್ಯಾಗ ಒತ್ತಿ ಬಾಳೂಕುನ ಹೋಟೆಲಿಗಿ ಮಂದಿ ಬಂದ ಸೇರಿದ್ರು.ಎಲ್ಲಾರ ಬಾಯಾಗೂ ಹಾಲಕ್ಕಿ ಅವರ ಶಕುನದ ಮಾತ.ಒಬ್ಬಬ್ಬರೂ ಒಂದೊಂದ ನಮೂನಿ ತಮಗ ತಿಳಿದಾಂಗ ಮಾತಡಾಕ ಹತ್ತಿದರು.ಈಗ ಆರ ತಿಂಗಳ ಹಿಂದಿಂದ ಊರ ಮ್ಯಾಲ ಹೆಲಿಕ್ಯಾಪ್ಟರ್ ಸುತ್ತಿ ಊರ ಸರ್ವೇ ಮಾಡಿದ್ದು,ಬಿಳಿ ಅಂಗಿ ಮಂದಿ ಬಂದ ಭಾಷಣಾ ಮಾಡಿದ್ದು ,ಬಿಳಿ ಕರಿ ಕೆಂಪ ಜೀಪಗಳು ಊರ ಮಗ್ಗಲ ಹೊಲಾ ಸುತ್ತಿ ಹೋಗಿದ್ದು,ಒಂದೊಂದು ಕಥಿ ಮಾಡಿ ತಮಗ ತಿಳಿದಾಂಗ ಹೇಳಿದರು. ಮತ್ತ ಊರಾನ ಕಾರಭಾರ ಮಂದಿ ಈಗೀಗ ಚೈನಿ ಜೋರ ಮಾಡಿದ್ದು ,ಊರ ಹಿರ್ಯಾರ ಅನ್ನೋ ಮಂದಿ ತಮ್ಮ ಪಾಡಿಗಿ ತಾವು ಗಪ್ಪ ಚುಪ್ಪ ಕುಂತದ್ದು ಒಂದೊಂದು ಯಾರಿಗೂ ತಿಳಿಯದಾಂಗ ಆತು .ಆದ್ರೂ ಹಾಲಕ್ಕಿ ಅವರ ಮಾತಿನ್ಯಾಗ ಏನೋ ಐತಿ ಅನ್ನೋ ಕರಾಳ ದಿನಮಾನ ನೆನಿಸಿಕೊಂಡು ಬಾಳೂಕು ಕೊಟ್ಟ ಚಾ ಕುಡಿದು ಉದ್ರಿ ಬರಕೊಳ್ಳಾಕ ಹೇಳಿ ಮನಿ ಕಡೆ ಮುಖಾ ಮಾಡಿದರು.ಮತ್ತೊಂದ ರಾತ್ರಿ ಹೀಂಗ ಹೋತು.
ಒಂದಿನಾ ಬೆಳಗು ಮುಂಜಾನಿ ತಮ್ಮದೆನ್ನೊದೆಲ್ಲಾ ಭೂಮಿ ತುಂಡ ತುಂಡ ಇದ್ದುದ್ದು ಒಂದ ಆಗಿ, ಒಂದ ಹತ್ತಾಗಿ, ಹತ್ತ ನೂರಾಗಿ ಕಣ್ಣ ಕಾಣೋತನಾ ಒಬ್ಬರದ ಆಗಿ, ಸುತ್ತ ಕ್ವಾಟಿಗ್ವಾಡಿ ಕಟ್ಟಿದಾಂಗ ಬೇಲಿ ಬಿಗಿದ ಬಿಳಿ ಬೋರ್ಡ್ನ್ಯಾಗ ಕರಿ ಅಕ್ಷರ ಬರದ ನಾಕೂ ಮೂಲಿಗಿ ನಿಲ್ಲಿಸಿದ್ದರು. ಊರಾಗ ಯಾರಿಗೂ ಓದಾಕ ಬರ್ತಿದ್ದಿಲ್ಲ. ಓದೋ ಮಕ್ಕಳಿಗಿ ಇದನೇನ ಬರದಾರ ಅಂತಾ ತಿಳಿತಿದ್ದಿಲ್ಲ. ಓದೋ ಹುಡುಗರೆಲ್ಲಾ ದೊಡ್ಡವರಾಗಿ ಪ್ಯಾಟಿ ಸೇರಿದ್ದರು. ಹೀಂಗಾಗಿ ಓದಿ ಹೇಳವರು ಬೇಕಾಗಿದ್ರು, ಓದುವರು ಯಾರರೆ ಬಂದಾರೇನು ಅಂತಾ ಬೋರ್ಡ್ ಮುಂದ ರೈತಾಪಿ ಜನ ಕುಂತ್ರು. ಬರ್ರ್ ಅಂತಾ ಜೀಪು ಬಂತು. ಪ್ಯಾಂಟಿನ ಮಂದಿ ಬಂದಾರ ಇವರ ಓದಿ ಹೇಳಲಿ ಅಂತಾ "ಸಾಹೇಬ್ರ ಈ ಬೋರ್ಡನ್ಯಾಗ ಏನ ಬರದಾರಿ ನಮಗಟ ಓದಿ ಹೇಳ್ರಿ" ಅಂದಾಗ ಅವಾಗ ಒಬ್ಬಾಂವ "ಕೇಳ್ರೆಪಾ ನಿಮ್ಮ ಊರಿಗಿ ದೊಡ್ಡ ಫ್ಯಾಕ್ಟರಿ ಬರತೈತಿ. ಎಲ್ಲಿ ಏನ ತಂತಿ ಬಿಗ್ಯಾಕ ಹತ್ಯಾರಲ್ಲ, ಅಕಾ ಅಲ್ಲಿ ನೋಡ ಒಂದ ಕಿಲೋಮೀಟರ್ ಮ್ಯಾಗ, ಇಕಾ ಇಲ್ಲಿ ನೋಡ ಒಂದ ಕಿಲೋಮೀಟರ ಮ್ಯಾಗ ಅಲ್ಲಿಂದ ಇಲ್ಲಿತನಾ ಫ್ಯಾಕ್ಟರಿ ಆಗತೈತಿ. ಇಡೀ ಜಗತ್ತಿಗೆ ಬೇಕಾದ ಎಲ್ಲಾ ಮಾಲ ಇಲ್ಲೇ ತಯಾರ ಆಗತೈತಿ. ನೀವು ಇನ್ನ ದುಡೀಬೇಕಾಗಿಲ್ಲ. ದುಃಖ ಪಡಬೇಕಾಗಿಲ್ಲ. ನಿಮ್ಮ ಜಮೀನಿಗೆ ಕೈತುಂಬ ದುಡ್ಡ ಸಿಗತಾವ. ಬದುಕಿರೋತನಾ ತಿಂದು ಉಂಡ ಚೈನಿ ಮಾಡಿ ಹೋಗ್ರಿ ತಿಳೀತೇನು" ಅಂತಾ ಬರ್ರ್ ಅಂತಾ ಜೀಪು ಮುಂದ ಹ್ವಾದ ಮ್ಯಾಲ ಹಿಂದಿಂದ ಬುಲ್ಡೋಜರು, ಕ್ರೇನು, ಹತ್ತಾರು ದೊಡ್ಡ ದೊಡ್ಡ ಮಿಶೆನ್ನು ಸದ್ದು ಮಾಡಕೊಂತ ಬಂದವು. ಜನಾ ಸರಿದ ನಿಂತ್ರು. ಕೆಂಪ ಧೂಳಿನ್ಯಾಗ ಜನಾ ಮರಿ ಆದ್ರು. ಬುಲ್ಡೋಜರ ಸಪ್ಪಳದಾಗ ದನಾಕರಾ, ಪ್ರಾಣಿ, ಪಕ್ಷಿ ಊರಬಿಟ್ಟು ಅಡವಿ ಹುಡುಕಿ ಹ್ವಾಂಟವು. ಸಿದ್ದಪ್ಪಜ್ಜ ಪಂಚಾಯ್ತಿ ಕಟ್ಟಿಮ್ಯಾಲ ಹೇಳಿ ಹ್ವಾದ ಮಾತ ಹಾಂಗ ಉಳೀತು............... (ಕೃಪೆ : ವಿಜಯ next )
===========================================================
ವಿಳಾಸ ;ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,
ನವನಗರ,ಬಾಗಲಕೋಟ-587103, ಮೊ.9845500890
ಶುಕ್ರವಾರ, ಮೇ 17, 2013
ಮಂಗಳವಾರ, ಮೇ 14, 2013
ಕನ್ನಡ ತತ್ತ್ವಪದ ಸಾಹಿತ್ಯ : ಡಾ.ಪ್ರಕಾಶ ಗ.ಖಾಡೆ
ಕನ್ನಡ ತತ್ತ್ವಪದ ಸಾಹಿತ್ಯ :ಜಾನಪದ,ಅನುಭಾವ ಮತ್ತು ಆಧ್ಯಾತ್ಮದ ಮೇರುನಿಧಿ
- ಡಾ.ಪ್ರಕಾಶ ಗ. ಖಾಡೆ,ಬಾಗಲಕೋಟ
ಕನ್ನಡ ಸಾಹಿತ್ಯದಲ್ಲಿ ಹದಿನಾರರಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಸಮೃದ್ಧವಾಗಿ ಬೆಳೆದುಕೊಂಡು ಬಂದ ತತ್ತ್ವಪದ ಸಾಹಿತ್ಯವು ಶರಣರ ವಚನ, ದಾಸರ ಕೀರ್ತನೆಗಳಂತೆ ಕಂಡರೂ ಜನಸಾಮಾನ್ಯರ ನಾಲಗೆಯ ಮೇಲೆ ಸುಲಭವಾಗಿ ಹರಿದಾಡಿ ಭಜನೆ ಮೊದಲಾದ ಸಂದರ್ಭಗಳ ಮೂಲಕ ಹೆಚ್ಚು ಜನಮುಖಿಯಾಯಿತು.. ನವೋದಯ ಆರಂಭದ ಕನ್ನಡ ಕಾವ್ಯವನ್ನು ರೂಪಿಸಿದವರು ಯಾರು ಎಂಬ ಬಗ್ಗೆ ಮುಖ್ಯ ಪ್ರಶ್ನೆಯನ್ನು ಹಾಕಿಕೊಂಡು ಉತ್ತರಕ್ಕಾಗಿ ನಿಂತಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ 18-19ನೆಯ ಶತಮಾನದಲ್ಲಿ ಕನ್ನಡ ಕಾವ್ಯ ಲೋಕವನ್ನು ಬೆಳಗಿದ ಅನುಭಾವಿ ಕವಿಗಳಾದ ತತ್ತ್ವ ಪದಕಾರರು, ಲಾವಣಿಕಾರರು ಮುಖ್ಯರಾಗುತ್ತಾರೆ. ತತ್ತ್ವಪದಗಳನ್ನು ಅನುಭಾವ ಸಾಹಿತ್ಯವೆಂದೂ ಕರೆಯಲಾಗುತ್ತಿದೆ. ತತ್ತ್ವಪದ ಸಾಹಿತ್ಯವನ್ನು ಶಿಷ್ಟಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕೆ? ಜನಪದ ಸಾಹಿತ್ಯ ಪರಂಪರೆÉಗೆ ಸೇರಿಸಬೇಕೆ? ಎಂಬ ಗೊಂದಲಗಳು ಇವೆ.
ಬಸವರಾಜ ಸಬರದ ಅವರು ‘ಹೈದರಾಬಾದ್ ಕರ್ನಾಟಕದ ತತ್ತ್ವಪದಗಳು’ ಕೃತಿಯಲ್ಲಿ ಈ ಪ್ರಶ್ನೆ ಎತ್ತಿಕೊಂಡು ಚರ್ಚಿಸಿದ್ದಾರೆ. ಅವರ ಒಟ್ಟು ಚರ್ಚೆಯ ಸಾರವನ್ನು ಹೀಗೆ ಪಟ್ಟಿ ಮಾಡಬಹುದು.
1. ತತ್ತ್ವಪದ ಸಾಹಿತ್ಯದ ಪ್ರಾರಂಭದ ಘಟ್ಟವನ್ನು ಅಂದರೆ 12ನೆಯ ಶತಮಾನದಲ್ಲಿ ಸ್ವರ ವಚನಗಳನ್ನು ರಚಿಸಿದ. ಸಕಲೇಶ ಮಾದರಸ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಈ ಮುಂತಾದ ವಚನಕಾರರನ್ನು ಈಗಾಗಲೇ ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸಲಾಗಿದೆ.
2. ಎರಡನೆಯ ಘಟ್ಟದಲ್ಲಿ ತತ್ತ್ವ ಪದಗಳನ್ನು ರಚಿಸಿ ತತ್ತ್ವಪದ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳನ್ನು ಕೂಡಾ ಶಿಷ್ಟ ಸಾಹಿತ್ಯ ಪರಂಪರೆಯಲ್ಲಿಯೇ ಸೇರಸಲಾಗಿದೆ. ಈ ಎರಡೂ ಘಟ್ಟಗಳು ಶಿಷ್ಟ ಸಾಹಿತ್ಯ ಚರಿತ್ರೆಯಲ್ಲಿ ಸೇರ್ಪಡೆಯಾಗಿರುವುದು ಸೂಕ್ತವೇ ಆಗಿದೆ.
3. ಹೊಸಗನ್ನಡ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಭಿಸುವುದನ್ನು ಕೈಬಿಟ್ಟು ಹೊಸಗನ್ನಡ ಸಾಹಿತ್ಯದ ಪ್ರಾರಂಭವನ್ನು ತತ್ತ್ವಪದಕಾರರಿಂದ ಪ್ರಾರಂಭಿಸಬೇಕಾಗಿದೆ ಎಂದು ಕಿ.ರಂ. ನಾಗರಾಜ ಅವರು ಅಭಿಪ್ರಾಯ ಪಡುತ್ತಾರೆ. ಕಿ.ರಂ. ನಾಗರಾಜ ಅವರ ಅಭಿಪ್ರಾಯಕ್ಕೆ ಭಿನ್ನವಾಗಿ ತತ್ತ್ವಪದ ಅಥವಾ ಭಜನೆ ಹಾಡಿನ ಸಾಹಿತ್ಯವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕಾಗುತ್ತದೆ ಎಂದು ಅನೇಕ ಜಾನಪದ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.
4. ಎಂ.ಎಸ್.ಸುಂಕಾಪುರ, ಪಿ.ವಿ.ಮಲ್ಲಾಪುರ, ಎಂ. ಜಿ. ಬಿರಾದಾರ ಹಾಗೂ ಶಾಂತರಸ ಅವರು ಈ ತತ್ತ್ವಪದ ಸಾಹಿತ್ಯವನ್ನು ಜನಪದ ಸಾಹಿತ್ಯದ ಭಾಗವೆಂದೇ ಗುರುತಿಸುತ್ತಾರೆ. ಲಾವಣಿಕಾರರಂತೆ ಜನಪದ ಸಾಹಿತಿಗಳಾಗುತ್ತಾರೆ ಎಂದು ಇವರ ವಿಶ್ಲೇಷಣೆ.
ಒಟ್ಟಾರೆ ಈ ಚರ್ಚೆಯ ಫಲಿತ ಇಷ್ಟು:ತತ್ತ್ವಪದ ಸಾಹಿತ್ಯವು ಶಿಷ್ಟ ಹಾಗೂ ಜನಪದ ಎರಡೂ ಸಾಹಿತ್ಯ ಪರಂಪರೆಗೆ ಸೇರಿದ್ದಾಗಿದೆ. ಧರ್ಮ ಸಮನ್ವಯ, ಭಾಷಾ ಸಮನ್ವಯ ಪ್ರಾದೇಶಿಕ ಸಮನ್ವಯವನ್ನು ಸಾಧಿಸುವುದರೊಂದಿಗೆ ತತ್ತ್ವಪದವು ಸಾಹಿತ್ಯ ಸಮನ್ವಯವನ್ನು ಸಾಧಿಸಿದೆ. ಇದು ತತ್ತ್ವ ಪ್ರೌಢವಾದುದೂ, ಶಿಷ್ಟ ಪರಂಪರೆಗೆ ಸೇರಿದುದು ಆದರೆ, ಇದರ ಅಭಿವ್ಯಕ್ತಿಯ ಕ್ರಮ ಜನಪದವಾಗಿದೆ. ಇಲ್ಲಿ ಉಲ್ಲೇಖಿಸಿದ ಮೊದಲ ಹಾಗು ಎರಡನೆಯ ಘಟ್ಟಗಳನ್ನು ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸುವುದು, ಇತ್ತೀಚಿನ ಬೆಳವಣಿಗೆಯಾದ ಮೂರನೆಯ ಘಟ್ಟವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸುವುದು.
ಈ ಚರ್ಚೆಯು ತತ್ತ್ವಪದ ಸಾಹಿತ್ಯವು ಜನಪದ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ತೆರೆದು ತೋರಿತು. ಜಾನಪದ ಪ್ರಜ್ಞೆಯ ಅಭಿವ್ಯಕ್ತಿಯೇ ಪ್ರಧಾನವಾಗಿ ಗುರುತಿಸಿಕೊಂಡಿತು ಮತ್ತು ಜನಪದ ರೂಪವೇ ಆಗಿ ಆಧುನಿಕ ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದಿತು. ಶಿಷ್ಟ ಕವಿಗಳಿಂದ ಪ್ರಾರಂಭವಾದ ತತ್ತ್ವಪದ ಸಾಹಿತ್ಯ ಪ್ರಕಾರ 19-20ನೆಯ ಶತಮಾನದಲ್ಲಿ ಜನಪದ ಕವಿಗಳ ವಶವಾಯಿತು. ಕನ್ನಡ ಶಿಷ್ಟ ಸಾಹಿತಿಗಳ ಮೇಲೆ ಜಾನಪದದ ಪ್ರಭಾವ ದಟ್ಟವಾಗಿರುವಂತೆ, ಕನ್ನಡ ಜನಪದ ಸಾಹಿತಿಗಳ ಮೇಲೆ ಶಿಷ್ಟ ಸಾಹಿತ್ಯದ ಪ್ರಭಾವವೂ ಆಗಿದೆ. ಇದಕ್ಕೆ ತತ್ತ್ವಪದ ಸಾಹಿತ್ಯ ಪ್ರಕಾರವೇ ಪ್ರಮುಖ ಸಾಕ್ಷಿಯಾಗಿದೆ. ಇವೆರಡೂ ಸಂಸೃತಿಗಳಲ್ಲಿ ಕೊಡು ಕೊಳ್ಳುವಿಕೆಯ ಕೆಲಸ ನಡೆದೇ ಇರುತ್ತದೆ. ತತ್ತ್ವಪದ ರಚನೆ ಜನಪದ ಕವಿಗಳಿಂದ ಪ್ರಾರಂಭವಾದ ಕೂಡಲೇ ಹಳ್ಳಿಗಳಲ್ಲಿ ಭಜನಾ ಮಂಡಳಿಗಳು ಹುಟ್ಟಿಕೊಂಡವು. ಅನೇಕ ಆಶು ಕವಿಗಳು ಬೆಳೆದು ನಿಂತರು. ಭಜನಾ ಮೇಳವಿಲ್ಲದ ಹಳ್ಳಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ಈ ಮಾಧ್ಯಮ ಬೆಳೆದು ನಿಂತಿತು. ಶಿಶುನಾಳ ಷರೀಫ್, ಕಡಕೋಳ ಮಡಿವಾಳಪ್ಪನಂತಹ ತತ್ತ್ವಪದಕಾರರು ಜನಪದ ಪರಂಪರೆಗೆ ಸೇರಿದರೂ ತಮ್ಮ ಪದಗಳಲ್ಲಿ ಗಹನವಾದ ತತ್ತ್ವಗಳನ್ನು ಹೇಳಿದ್ದಾರೆ. ಅನುಭಾವದೆತ್ತರವನ್ನು ತಲುಪಿದ್ದಾರೆ. ಇವರು ಪಡೆದ ಸಂಸ್ಕಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಶಿಷ್ಟ ಪರಂಪರೆಯಲ್ಲಿ ಬರುವ ತತ್ತ್ವಪದಕಾರರಿಗೆ ವಿಶೇಷವಾದ ಗುರು ಕಂಡು ಬರುವುದಿಲ್ಲ. ಆದರೆ ಜನಪದ ಪರಂಪರೆಯಲ್ಲಿ ಬರುವ ತತ್ತ್ವಪದಕಾರರು ಗುರುವಿನ ಸಂಸ್ಕಾರದಿಂದ ತಾವು ಕವಿಗಳಾಗಿ ಬೆಳೆದು ನಿಂತಿದ್ದಾರೆ. ಅದನ್ನವರು ಭಕ್ತಿಯಿಂದ ಸ್ಮರಿಸಿದ್ದಾರೆ. ಒಬ್ಬೊಬ್ಬ ತತ್ತ್ವಪದಕಾನ ಹಿಂದೆ ಒಬ್ಬೊಬ್ಬ ಗುರು ಇದ್ದಾನೆ ಜನಪದ ಪರಂಪರೆ ಅದನ್ನು ಸ್ವೀಕರಿಸಿಕೊಂಡು ಬೆಳೆದಿದೆ.
ಮೌಖಿಕ ಪರಂಪರೆಯ ತತ್ತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲ ಕೂಸಿನಂತೆ ಜತನ ಮಾಡಿಕೊಂಡು ಬಂದರು. ತತ್ತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದವರ ಜತೆ ಬೆರತು ಜಾತಿ ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು. ಎಚ್. ಎಸ್. ಶಿವಪ್ರಕಾಶ್ ಅವರು ಇದನ್ನೇ ‘ಎಲ್ಲ ಜಾತಿಯ ಮರಗಳು ಕಾಡು’ ಎಂದು ಕರೆದು ಗ್ರಾಮೀಣ ಸೊಗಡಿನ ಬಂಧುತ್ವ, ಬಾಂಧವ್ಯಕ್ಕೆ ಈ ಕಾವ್ಯದ ಅಪ್ಪಟ ದೇಸಿತನವನ್ನು ಪ್ರಕಟಿಸಿದರು.
ಭಜನಾ ಸಮುದಾಯಗಳು :
ಭಜನೆಗಳ ಮೂಲಕ ತತ್ತ್ವಪದಗಳು ಬಳಕೆಯಾಗುತ್ತ ಉಳಿದುಕೊಂಡು ಬಂದವು. ನಮ್ಮ ಗ್ರಾಮಗಳಲ್ಲಿ ‘ಭಜನೆ ಹಚ್ಚುವ’ ಸಂದರ್ಭಗಳಿಗೆ ಇಂಥದೇ ಕಾರಣ ಎಂಬುದಿಲ್ಲ. ಅಮವಾಸ್ಯೆ, ಹಣ್ಣಿಮೆ, ಹಬ್ಬ ಹರಿದಿನ, ಸಾವು, ಸಂಭ್ರಮ, ಕಾರ್ತಿಕ, ಕಾರಣಿಕ- ಹೀಗೆ ಮನೆ, ಮಠ, ಗುಡಿ ಗುಂಡಾರವೆನ್ನದೆ ಎಲ್ಲಿ ಬೇಕಾದಲ್ಲಿ ಹಾಡುವುದು ಇದೆ. ಶುಭ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುವ ಈ ಭಜನೆ ಹಳ್ಳಿಗರ ಜ್ಞಾನ ಕ್ಷೇತ್ರವನ್ನು ವಿಸ್ತರಿಸುವ ಮತ್ತು ಬದುಕು ಹಸನುಗೊಳಿಸುವ ದಿಸೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಭಜನಾ ಸಮುದಾಯಗಳು ತತ್ತ್ವಪದಗಳ ವಾಹಕರಾಗಿ ಪರಂಪರೆಯಲ್ಲಿ ಬೆಳೆದುಕೊಂಡು ಬಂದವು. ಭಜನೆಕಾರರ ಮೂಲಕ ಮೌಖಿಕವಾಗಿ ಉಳಿದುಕೊಂಡು ಬಂದ ಈ ಪದಗಳು ವಿವಿಧ ನೆಲೆಗಳಲ್ಲಿ ಭಿನ್ನರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ‘ತತ್ತ್ವಪದಕಾರರು ತಮ್ಮ ಸಾಹಿತ್ಯವನ್ನು ಮೌಖಿಕವಾಗಿ ಹಾಡಿದರು. ಅದನ್ನು ಬಳಸುವ ಸಂದರ್ಭಗಳು ಬಂದಾಗ ಬಳಸುವವರು ಮೋಡಿ, ಕನ್ನಡ ಲಿಪಿಯಲ್ಲಿ ಬರೆದುಕೊಳ್ಳುತ್ತಿದ್ದರು. ಬಹು ಭಾಷೆಯಲ್ಲಿ ತತ್ತ್ವಪದಗಳನ್ನು ಕವಿಗಳೇ ಹಾಡಿರುವುದು ಸರಿಯಷ್ಟೇ. ಜನ ಸಮುದಾಯಗಳೂ ತತ್ತ್ವಪದಗಳನ್ನೂ ತಮಗೆ ಪ್ರಿಯವಾದ ಭಾಷೆಗೆ ಪರಿವರ್ತಿಸಿಕೊಂಡು ಹಾಡಿದ್ದಾರೆ. ಬೇರೆ ಬೇರೆ ಪ್ರದೇಶದ ಭಜನಾ ಮೇಳಗಳು ತಮಗೆ ಹತ್ತಿರದ ಸ್ಥಳೀಯ ತತ್ತ್ವಪದಕಾರರ ಹಾಡುಗಳನ್ನು ಬಳಸಿಕೊಂಡು ಹಾಡುತ್ತಿದ್ದವು. ಇಂಥ ಭಜನಾ ಮೇಳಗಳು ಸೊಲ್ಲಾಪುರ, ಪಚಿಡಾರಾಪುರ, ಕಲಬುರ್ಗಿ, ಗಾಣಾಗಾಪುರ, ಶ್ರೀಶೈಲ, ಹಂಪಿ, ಮಂತ್ರಾಲಯ, ಮುಂತಾದ ಪ್ರಸಿದ್ಧ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳು ಪ್ರಿಯವಾದರೆ ಅಂಥ ಹಾಡುಗಳನ್ನು ತಮ್ಮ ಭಾಷೆಗೆ ಪರಿವರ್ತಿಸಿಕೊಂಡು ಹಾಡುತ್ತಿದ್ದವು” ಎಂಬುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿದ್ದಾರೆ.
ತತ್ತ್ವಪದಗಳು ಕನ್ನಡದಲ್ಲಿ ಬಗೆ ಬಗೆಯ ಹೆಸರುಗಳಿಂದ ಬೆಳೆದುಕೊಂಡು ಬಂದಿವೆ. ಪರಮಾತ್ಮನ ಬಗೆಗಿನ ಅನುಭಾವ ಈ ಪದಗಳಲ್ಲಿ ವ್ಯಕ್ತಗೊಂಡುದರಿಂದ ಇದಕ್ಕೆ ಅನುಭಾವ ಪದಗಳೆಂದೂ, ಇವನ್ನು ಏಕತಾರಿಯಂತಹ ವಾದ್ಯದೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದೂ, ಅಂತರಂಗದ ಅರಿವಿನ ಮೂಲಭೂತ ತತ್ತ್ವಗಳನ್ನು, ಆಧ್ಯಾತ್ಮಿಕ ತತ್ತ್ವಗಳನ್ನು ಇವು ಒಳಗೊಂಡಿರುವುದರಿಂದ ಇವಕ್ಕೆ ತತ್ತ್ವಪದಗಳೆಂದೂ, ಇವನ್ನು ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಪದಗಳೆಂದೂ ಕರೆದುಕೊಂಡು ಬರಲಾಯಿತು. ಒಟ್ಟಿನಲ್ಲಿ ಇವು ಮೌಖಿಕ ಸಾಹಿತ್ಯದ ಗಮನಾರ್ಹ ಕಾವ್ಯ ಪ್ರಕಾರಗಳಗಿವೆ.
ತತ್ವಪದ ಸಾಹಿತ್ಯ ಪರಂಪರೆ :
ತತ್ತ್ವಪದ ಪರಂಪರೆಯಲ್ಲಿ ಮುಪ್ಪಿನ ಷಡಕ್ಷರಿ (1500), ಚಿದಾನಂದ ಅವಧೂತರು (1750), ರಾಮಪುರದ ಬಕ್ಕಪ್ಪ (1750), ಸಾರವಾಡ ಚಿಕ್ಕಪ್ಪಯ್ಯ (1758), ಹಾಗಲವಾಡಿ ಮದ್ವೀರೆ ಸ್ವಾಮಿಗಳು (1750), ಮೈಲಾರದ ಬಸವಲಿಂಗ ಶರಣರು (1700), ನಿಂಬರಗಿ ಮಹಾರಾಜರು (1750), ಶಂಕರಾನಂದರು (1750), ನೀರಲಕೇರಿ ಪಂಚಾಕ್ಷರಿ (1800), ಕೂಡಲೂರು ಬಸವಲಿಂಗ ಶರಣರು (1800), ಸರ್ಪಭೂಷಣ ಶಿವಯೋಗಿ (1825), ಬಾಲಲೀಲಾ ಮಹಾಂತ ಶರಣರು (1850), ಶಿಶುನಾಳ ಶರೀಫ್ ಸಾಹೇಬ (1840), ಕಡಕೋಳ ಮಡಿವಾಳಪ್ಪ (1850), ಮೊದಲಾದವರು ಪ್ರಮುಖರಾಗಿದ್ದಾರೆ.
ಈ ಪರಂಪರೆಯಲ್ಲಿ ಮುಸ್ಲಿಂ ತತ್ತ್ವಪದಕಾರರ ಸಾಧನೆ ಗಮನಾರ್ಹವಾದುದು. ಕರ್ನಾಟಕದ ಉತ್ತರ ಭಾಗದಲ್ಲಿ ದೀರ್ಘಕಾಲ ‘ಹಿಂದೂ-ಮುಸ್ಲಿಂ’ ಎರಡೂ ಸಮುದಾಯಗಳು ಕೂಡಿ ಬಾಳುತ್ತ ಬಂದಿವೆ. ಎರಡು ಸಂಸ್ಕøತಿಗಳ ನಡುವೆ ಸಂಘರ್ಷ ಸಾಮರಸ್ಯಗಳು ಏರ್ಪಟ್ಟಿವೆ. ಮುಖ್ಯವಾಗಿ ಮುಸ್ಲಿಂ ತತ್ತ್ವಪದಕಾರರು ಎರಡು ಸಂಸ್ಕøತಿಗಳ ಸಾಮರಸ್ಯ ಮತ್ತು ಬಾಂಧವ್ಯಕ್ಕೆ ಅಪರೂಪದ ಕೊಡುಗೆ ನೀಡಿದರು. ಚನ್ನೂರ ಜಲಾಲಸಾಬ (1700), ಮೇಟ್ನಳ್ಳಿ ಹಸನಸಾಬ (1855), ಕೋಹಿನೂರ ಹಸನ (1875), ದೇಗಾವಿ ಹಜರತ್ (1917), ಮಂಜಿಲಾನ ಖಾದರಸಾಬ (1930), ಅರವಲಿ ಬಿಜಲಿ ವಸ್ತಾದಿ (1930), ಸಾವಳಗಿ ಮಹಮ್ಮದಸಾಬ (1917), ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಮೊದಲಾದವರು ಹೆಸರಾಗಿದ್ದಾರೆ. ಮುಸ್ಲಿಂ ಪ್ರಭುತ್ವವಾದಿಗಳ ಆಳ್ವಿಕೆಯ ಅಧಿಕೃತ ಭಾಷೆ ಉರ್ದು ಇದ್ದುದರಿಂದ ಕನ್ನಡ ಸಾಹಿತ್ಯ ರಚನೆಗೆ ತೊಂದರೆಯಾಯಿತೆಂದು ಆಧುನಿಕರ ಹೇಳಿಕೆಗೆ ಅನುವು ಸಿಗದಂತೆ ಈ ಮುಸ್ಲಿಮ್ ತತ್ತ್ವಪದಕಾರರು ಕನ್ನಡದಲ್ಲಿ ತತ್ತ್ವಪದಗಳನ್ನು ಹಾಡಿರುವುದು ವಿಶೇಷವಾಗಿದೆ. ಹೀಗೆ ಹಲವು ನೆಲೆಯಲ್ಲಿ ಹರಿದು ಬಂದ ತತ್ತ್ವಪದ ಸಾಹಿತ್ಯ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದಾಗ ಮೂಡಿ ಬಂದ ಕನ್ನಡದ ಕಾವ್ಯ ಚರಿತ್ರೆಯಲ್ಲಿ ಪ್ರತಿಷ್ಠಿತ ಸ್ಥಾನ
ಪಡೆದುಕೊಳ್ಳುತ್ತಿರುವುದು ಇಲ್ಲಿ ದೇಸೀ ಅಧ್ಯಯನಗಳು ಹೆಚ್ಚು ವ್ಯಾಪಕವಾಗಿ ನಡೆದಾಗ ಸಾಧ್ಯವಾಯಿತು.
ತತ್ತ್ವಪದ ಸಾಹಿತ್ಯ ನವೋದಯ ಕಾವ್ಯದ ಅಪ್ಪಟ ಮಾದರಿಗಳಿಗೆ ಪೂರಕವಾಗಿವೆ. ಸೃಜನಶೀಲ ಕಾವ್ಯದ ಎಲ್ಲ ಬಗೆಯ ಲಕ್ಷ ಲಕ್ಷಣ ರೀತಿ ನೀತಿಗಳನ್ನು ಆಗಲೇ ಕಟ್ಟಿಕೊಂಡಿದ್ದ ಈ ರಚನಕಾರರು ಎಲ್ಲ ಬಗೆಯ ವಸ್ತು ಸಂಗತಿಗಳಿಗೆ ಪ್ರತಿಸ್ಪಂದಿಸಿದರು. ಅವರ ಕವಿತೆಗಳು ಸಾಮಾಜಿಕ ಬದುಕನ್ನು, ಬದುಕಿನ ಜಂಜಾಟ, ತಾಪತ್ರಯಗಳಿಗೆ ಉತ್ತರ ರೂಪವಾಗಿ ಉದಾಹರಣ ಸಂದರ್ಭಗಳನ್ನು ಬಳಸಿಕೊಂಡು ಹಾಡಿಕೊಂಡು ಬಂದರು. ಪ್ರಕೃತಿ, ಪಕ್ಷಿ, ಪ್ರಾಣಿ, ಸೂರ್ಯ, ಚಂದ್ರ, ಹೊಳೆ ಹಳ್ಳ, ಸಾವು, ಬದುಕು ಎಲ್ಲ ಎಲ್ಲಕ್ಕೂ ಪ್ರತೀಕ, ಹೋಲಿಕೆ, ಆಧ್ಯಾತ್ಮ, ಅನುಭಾವ ಬಳಸಿ ಸರಳ, ಸುಲಭವಾಗಿ ಯಾರೂ ಹಾಡಿಕೊಂಡು ಆಡಿಕೊಂಡು ಸಂಭ್ರಮಿಸುವ ರೀತಿಯಲ್ಲಿ ಕಟ್ಟಿ ಹಾಡಿದರು. ಡಾ. ಕೆ. ಸಿ. ಶಿವಾರೆಡ್ಡಿ ಅವರ ಅಭಿಪ್ರಾಯದಂತೆ “ತತ್ತ್ವಪದಕಾರರ ಪ್ರಧಾನ ಸಾಮಗ್ರಿ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚಳವಳಿಯಾದ ವಚನ ಹಾಗೂ ದಾಸ ಸಾಹಿತ್ಯದ ನೆಲೆಯಿಂದ ಬಂದದ್ದು. ಆದರೆ ಆ ಸಾಮಗ್ರಿಯನ್ನು ವರ್ತಮಾನದ ಸಂದರ್ಭವನ್ನು ಹೊರತುಪಡಿಸುವಂತೆ ಅವರು ಪುನರ್ ನಿರ್ಮಾಣ ಮಾಡುತ್ತಾರೆ. ಹೀಗಾಗಿ ತತ್ತ್ವಪದಕಾರರ ರಚನೆಗಳು ಪಾಂಡಿತ್ಯದ ಪ್ರಭಾವದಿಂದ ಪಾರಾಗಲು ಸಾಧ್ಯವಾಗದೆ ಹೋಗಿವೆ. ಆದರೂ ತತ್ತ್ವಪದಕಾರರ ಒಟ್ಟು ಸೃಷ್ಟಿ ಕನ್ನಡ ಸಂಸ್ಕøತಿಯ ಸಂದರ್ಭದಲ್ಲಿ ಗಂಭೀರವಾದ ಸೃಜನಶೀಲ ದಾಖಲೆಯಾಗಿವೆ’ಎಂದಿರುವುದು ತತ್ತ್ವಪದಕಾರರ ಹಿರಿಮೆಯನ್ನು ಸಾರಲಾಗಿದೆ.
ಆಧುನಿಕ ಕಾಲದ ಅನೇಕ ಸಂವೇದನೆಗಳಿಗೆ ತತ್ತ್ವಪದಕಾರರ ಸ್ಪಂದನವಿದೆ. 20ನೇ ಶತಮಾನದ ‘ಸಂವೇದನೆ’ಯೂ ಮೌಖಿಕ ಸಾಹಿತ್ಯದಲ್ಲಿ ಮೂಡಿ ಬಂದಿದೆ. ರಾಷ್ಟ್ರೀಯವಾದ, ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಪಿಡುಗು, ಭ್ರಷ್ಟಾಚಾರ, ಹೋ ಟೇಲ್, ವಕೀಲ, ಕೋರ್ಟ್ ಮುಂತಾದವು ತತ್ತ್ವಪದ ಸಾಹಿತ್ಯದಲ್ಲಿ ಕುತೂಹಲಕಾರಿಯಾಗಿ ವ್ಯಕ್ತವಾಗಿದೆ. ಅಷ್ಟೇ ಏಕೆ ನವೋದಯ ಕಾವ್ಯದ ಅನೇಕ ಲಕ್ಷಣಗಳು ಕೂಡಲೂರು ಬಸಲಿಂಗಪ್ಪನ ತತ್ತ್ವಪದಗಳಲ್ಲಿ ಆಧುನಿಕತೆ ಉಂಟು ಮಾಡಿದ ಬಿಕ್ಕಟ್ಟುಗಳು ,ವಡಕಿ ತಾತಪ್ಪಯ್ಯನ ತತ್ತ್ವಪದಗಳಲ್ಲಿ ವ್ಯಕ್ತವಾಗಿವೆ. ಆಧುನಿಕರಲ್ಲದ ಆದರೆ ಆಧುನಿಕ ಕಾಲಘಟ್ಟದಲ್ಲಿ ಬದುಕಿ ಬಾಳಿದ ವಡಕಿ ತಾತಪ್ಪಯ್ಯ, ನಿಜಲಿಂಗ ಭದ್ರೇಶ್ವರ, ಶಿಲ್ಲಪ್ಪ ಮುಂತಾದ ತತ್ತ್ವಪದಕಾರರ ಸಾಹಿತ್ಯದಲ್ಲಿ ತಾಂತ್ರಿಕವಾದ ಆಧುನಿಕ ಸಂವೇದನೆಗಳಿರುವುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿರುವುದು ತತ್ತ್ವಪದಕಾರರು ಕನ್ನಡ ನವೋದಯದ ಮೊದಲ ಹರಿಕಾರರಾಗುತ್ತಾರೆಂಬುದು ಇನ್ನೂ ಸ್ಪಷ್ಟವಾಗುತ್ತದೆ.
ಗ್ರಾಮ್ಯವನ್ನು ಬಳಸಿ ಈ ತತ್ತ್ವಪದಕಾರರು ತಮ್ಮ ಅಂತರಂಗದ ಸೂಕ್ಷ್ಮ ಭಾವನೆಗಳನ್ನು, ಆರೋಗ್ಯಕರ ಪ್ರೇಮವನ್ನು, ಬ್ರಿಟಿಷರ ದಬ್ಬಾಳಿಕೆ ಮತ್ತು ‘ಕ್ರೂರ’ ಯಂತ್ರ ನಾಗರಿಕತೆಯ ಸಂದರ್ಭದಲ್ಲಿ ಅಭಿವ್ಯಕ್ತಿಸಿದರು. ತಮ್ಮ ಸುತ್ತಣ ಸಮುದಾಯದ ಸಂದರ್ಭಗಳಲ್ಲಿ ನಾಶಗೊಳ್ಳುತ್ತಿದ್ದ ಮನುಷ್ಯ ಸಂಬಧಗಳನ್ನು ಕುರಿತು ಅವರು ಪದ ಕಟ್ಟಿ ಹಾಡಿದರು.
ಗಡಗಿ ತೊಳೆದು ಅಡಗಿ ಮಾಡಮ್ಮ | ತನುವೆಂಬ
ಗಡಗಿ ತೊಳೆದು ಅಡಗಿ ಮಾಡಮ್ಮ
ಅನುಭಾವದಡುಗೆಯ ಮಾಡಿ ಎಡಿಯ ಮಾಡಮ್ಮ
ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ
ಕರ್ಮವೆಂಬ ಜೋಳ ಬೀಸವ್ವ | ನೀ
ಧರ್ಮ ಜರಡಿಯಿಂದ ಹಿಟ್ಟ ಸೋಸವ್ವ
ನಿರ್ಮಳಾತ್ಮ ನೀರ ಹಾಕವ್ವಾ | ನೀ
ನೇಮದಿಂದ ಕಣಕ ನಾದವ್ವಾ
ಹೀಗೆ ಸಾಗುವ ಕಡಕೋಳ ಮಡಿವಾಳಪ್ಪನವರ ತತ್ತ್ವಪದದಲ್ಲಿ ದೇಹವನ್ನು ಗಡಿಗೆಗೆ, ಅನುಭಾವವನ್ನು ಅಡಿಗೆಗೆ ಹೋಲಿಸಿದ್ದಾರೆ. ಅನುಭಾವದಡಿಗೆಯನ್ನು ಮಾಡಲು ಕರ್ಮವೆಂಬ ಜೋಳ ಬೀಸಿ ಧರ್ಮವೆಂಬ ಜರಡಿಯಿಂದ ಹಿಟ್ಟು ಸಾರಣಿಸಿ ಅದರಲ್ಲಿ ನಿರ್ಮಳಾತ್ಮ ನೀರು ಹಾಕಿ ನಾದಬೇಕು., ನಾದಿ ಸಂಚಿತ ಕರ್ಮದ ಹಂಚನ್ನು ತೊಳೆದು ಹಂಚಿಕಿಂದ ಜ್ಞಾನದ ಅಗ್ನಿ ಉರಿಸಿ ಸಂಚಿನಿಂದ ಪರರೊಟ್ಟಿ ಬೇಯಿಸಬೇಕೆನ್ನುವಲ್ಲಿ ಅರ್ಥಪೂರ್ಣ ಅನುಭಾವವನ್ನು ಪ್ರಕಟಿಸುತ್ತಾರೆ.
ಶಿಶುನಾಳ ಶರೀಫ್ ಸಾಹೇಬರ ತತ್ತ್ವಪದಗಳು ಕನ್ನಡದಲ್ಲಿ ಜನಪ್ರಿಯತೆಯಿಂದ ಮೆರೆಯುತ್ತಿವೆ. ಈ ಜನಪ್ರಿಯತೆಗೆ ಕಾರಣ ಮೂಲದಲ್ಲಿ ಮೌಖಿಕ ಕಾವ್ಯವಾಗಿದ್ದ ಈ ಪದಗಳು ಪಠ್ಯ ರಚನೆಗಳಾಗಿ ಉಳಿದುಕೊಂಡಾಗ ನಮ್ಮ ಕನ್ನಡದ ಪ್ರಸಿದ್ಧ ಗಾಯಕರು ಅವನ್ನು ಹಾಡಿ ತೋರಿಸಿದಾಗ ಶರೀಫ್ರ ಕಾವ್ಯ ಕೀರ್ತಿ ಬೆಳಗಿತು. ‘ಸದ್ಗುರು ಸಾಕಿದ ಮದ್ದಾನೆ’ ಎಂದು ಹೆಸರಾದ ಶರೀಫ್ರಿಗೆ ಗೋವಿಂದ ಭಟ್ಟರು ಗುರುಗಳು. ಶರೀಫ್ರ ತತ್ತ್ವಪದಗಳಲ್ಲಿ ಜೀವನ ಮತ್ತು ಆಧ್ಯಾತ್ಮ ಹಾಸು ಹೊಕ್ಕಾಗಿದೆ. ಜನಪದರ ಎಲ್ಲಾ ಬಗೆಯ ಸತ್ವ, ಶಕ್ತಿಗಳನ್ನು ಮೈದುಂಬಿಕೊಂಡು ರಚಿತವಾದ ಅವರ ಕಾವ್ಯ ಅದನ್ನು ತೊಟ್ಟಿಕ್ಕಿದೆ.
‘ಸಂಸಾರಿಕನ ಮನಸ್ಸನ್ನು ಈ ಲೋಕದಿಂದ ಆ ಲೋಕಕ್ಕೆ ಕರೆದಪಯ್ಯುವ ಶರೀಫ್ರ ಗೀತೆಗಳಲ್ಲಿ ಅನುಭಾವ ತತ್ತ್ವ ಸೂಸಾಡಿದೆ. ಜೀವ ಪರಮದ ಐಕ್ಯ, ಬಾಳಿನ ಆಶ್ವಾಸತತೆ, ಅಸಾರಗಳ ಸೃಷ್ಟಿ ಚಿತ್ರಣವಿದ್ದರೂ ಅವು ಬರೀ ಉಪದೇಶಕ್ಕಾಗಿ ಮಾತ್ರ ಬರೆದವುಗಳಲ್ಲ, ಅದರೊಳಗೆ ಕೇವಲ ಆತ್ಮ ವಿಚಾರವೊಂದೇ ಇಲ್ಲ, ತತ್ತ್ವಜ್ಞಾನದ ಜೊತೆಗೆ ಸಾಹಿತ್ಯದ ಸವಿ ಸೊಗಸು ಸೂಸುವುದನ್ನು ಕಾಣುತ್ತೇವೆ. ಅವುಗಳನ್ನು ನಾಡಿನ ಗಾಯಕರೂ ಭಜನಾ ಮೇಳದವರೂ ಹಾಡಿ ನಲಿಯುತ್ತಾರೆ.
“ಶರೀಫ್ರ ಹಾಡುಗಳೆಂದರೆ ಅರುಹಿನ ಅತ್ಮರತಿಯಲ್ಲಿ ಬಿಗಿಯಾಗಿ ಬಿರುಕಿಲ್ಲದಂತೆ ನೇಯ್ದ ಆತ್ಮಗೀತೆಗಳು” ಎಂದು ಕರೆದಿರುವ ಡಾ. ಮಲ್ಲಿಕಾರ್ಜುನ ಸಿಂದಗಿ ಅವರು ‘ಒಂದು ನಿಟ್ಟಿನಲ್ಲಿ ಅವು ವ್ಯಕ್ತಿಗತ, ಮಗದೊಂದು ನಿಲುವಿನಲ್ಲಿ ಸರ್ವಮಾನ್ಯ, ವಿಶ್ವಮಾನ್ಯ, ಇಹದ ಪಡಿ ಪದಾರ್ಥಗಳಿಗೆ ಪರದ ಅಮೃತ ಲೇಪನ ಲೇಪಿಸಿ, ಅಸತ್ಯವಾದವುಗಳಿಗೆ ನಿತ್ಯತ್ವವನ್ನು ಕೊಟ್ಟು, ಎಲ್ಲಿಯೂ ಅರ್ಥ ಕೆಡದಂತೆ, ಅಸಹ್ಯವೆನಿಸದಂತೆ, ಶಿವಲೋಕದ ಹಿರಿಮೆಯನ್ನು ಸರಳವಾಗಿ ತತ್ತ್ವದಲ್ಲಿ ಹಣೆದ ದೈವೀ ನೇಕಾರರು ಎಂದು ಕರೆದುದರಲ್ಲಿ ಸಾರ್ಥಕತೆ ಇದೆ.
ಅಳಬ್ಯಾಡ ತಂಗಿ ಅಳಬ್ಯಾಡ | ನಿನ್ನ
ಕಳುಹ ಬಂದವರೆಲ್ಲ ಉಳುವಿಕೊಂಬುವರೇನೆ||
ಗ್ರಾಮ್ಯ ಭಾಷೆಯ ನುಡಿ ಸಾಲುಗಳಲ್ಲಿ ಹೆಣೆದಿರುವ ಈ ಪದ ಮದುವೆಯಾದ ಹೆಣ್ಣು ಮೊದಲ ಸಲ ಅತ್ತೆಯ ಮನೆಗೆ ಹೋಗುವ ಭಾವಮಯವಾದ ಸನ್ನಿವೇಶವನ್ನು ಸೃಜಿಸಿದರೂ ಕೊನೆಗೆ ಅನುಭಾವದ ನೆಲೆಗೆ ತಂದು ಹಚ್ಚುತ್ತವೆ. ‘ಮಿಡಿಕ್ಯಾಡಿ ಮದಿವ್ಯಾದಿ, ಹುಡುಕಾಡಿ ಮಾಯದ ಮರವೇರದಿ’ ಎಂತೆಲ್ಲ ಮಾತುಗಳು ಜೀವ ತಾನಾಗಿ ಭೋಗಕ್ಕೆ, ಮಾಯೆಗೆ ಒಲಿದದ್ದನ್ನು ಸೂಚಿಸುತ್ತದೆ. ತವರು ಮನೆ ಜೀವದ ನಿಜ ನೆಲೆಗೆ ರೂಪಕವಾಗುತ್ತದೆ.
ತತ್ತ್ವಪದಕಾರರು ಬಳಸುವ ಭಾಷೆಯಲ್ಲಿ ಜನರಾಡುವ ಮಾತಿಗೆ ಕಾವ್ಯತ್ವವನ್ನು ತುಂಬಿದರು.
ಹಾಲ ಕಾಸವ್ವ ತಂಗಿ ಹಾಲು ಕಾಸು
ನಿಂದು ಒಳ್ಳೆ ಮನಸ
ಹಾಲ ಕಾಸಿ ಹೆಪ್ಪ ಹಾಕಿ ಕೆನಿಯ ಬಡಸ
ಇದು ಬಹಳ ಸೊಗಸ
(ತೆಲಗಬಾಳ ರೇವಪ್ಪ, 1790)
ನೆಚ್ಚಿಕಿಲ್ಲದ ಕಾಯಾ ನೀರಮ್ಯಾಲಿನ ಗುಳ್ಳಿ
ಗುಳ್ಳಿ ಒಡೆದ ಮ್ಯಾಲ ಆಗಿ ಹೋಯಿತು ಸಂತಿ
(ಕಡ್ಲೆವಾಡ ಸಿದ್ದಪ್ಪ, 1811)
ಆಡೋ ಗುಗ್ಗಳ ಅಡಿಗಡಿನಾಡಿಸೋ ಗುಗ್ಗಳ
ಅಡಿಯಾಡಿ ಉಗ್ಗಡಿಸೋ ಗುಗ್ಗಳ
(ಮೋಟನಳ್ಳಿ ಹಸನಸಾಹೇಬ, 1955)
ಹರಗ್ಯಾನ ಹಿಂಡ ಹೊಡದು ಸರಗೈ ಬಿತ್ತಪ್ಪ
ಬಕನೈದು ಬರತಾವ ಮ್ಯಾಲಿಂದ ಮ್ಯಾಲ
ಅವು ಸೇರಿ ಮಾಡತಾವ ಕಿಲ ಕಿಲ
ಭಾರಾ ಸೀತನಿ ಇದ್ದಲ್ಲಿ ನೂರಾರ
ಕೂಡತಾವ ದಾರಾರಿ ತೆನಿಯ ಮ್ಯಾಲ
(ಬೇನೂರಿನ ಖಾಕಿಪೀರ, 1874)
ಅಳ್ಳಿಮುದ್ದಿ ಕಂಡ ಬೆಕ್ಕು ಬೆಣ್ಣೆಯೆಂದು ತಿಳಿತು
ಸುಳ್ಳೇ ಬಾಯಿ ಹಾಕಿ ಸತ್ತಿತು | ತಿಳಿ ಇದರಂತೆ
ಮಳ್ಳ ನಿನ್ನ ಭ್ರಾಂತಿ, ತಳ್ಳೋ ಸಂಸಾರ
ಚಿಂತಿ ಸುಳ್ಳೇ ಹಚಗೊಂಡು ಕುಂತಿ
(ಮಾದನ ಹಿಪ್ಪರಗಾ ಸಿದ್ಧರಾಮ ಶಿವಯೋಗಿ, 1891)
ಘಾಸಿ ಆದ ಈ ಹೇಸಿ ಸಂಸಾರ ಯಾನೆ ಹ್ಯಾಂಗ ಆದಿತ್ತೋ
ಕಾಸು ತುಗೊಂಡು ಕಾಶಿಗೆ ಹೋದರ ಪಾಪ ಹ್ಯಾಂಗ ಹೋಗಿತ್ತೋ
(ಮಹಾಗಾಂವ ಮೀರಸಾಬ, 1971)
ಆಲಾವಿನಾಡಿರೋ | ಪೀರನ ಆಲಾವಿನಾಡಿರೋ
ಬಸವೈ ಕೆವಸೈ ದೂಲಯಾಲ ಅನ್ನಿರಿ ಜನರೇ
(ನೀರಲಕೇರಿ ಬಸವಲಿಂಗ ಶರಣ, 1812)
ತಿಳಿದು ನೋಡುವುದು ಸುಜ್ಞಾನ
ಮನ ತೊಳೆದು ನೋಡುವುದು ಮಹಾಜ್ಞಾನ !
ತಿಳಿಯದೆ ತೊಳೆಯದೆ ಮೂರು ಮಲಗಳೊಳ್
ಮುಳುಮುಳುಗ್ಯಾಡುವುದು ಅಜ್ಞಾನ
(ಮರಕುಂದಿ ಬಸವಣ್ಣಪ್ಪ, 1780)
ಹದವಾಗಿ ಹದಿಮೂರು ತೂತಿಂದ ಹುಟ್ಟಿ ಬಂದದ ಗಡಗಿ
ಮಾಡಲಾಕ ಕಲ್ತರ ನೀಡಲಾಕ ಬರತಾದ ಅನುಭಾವದ ಅಡಗಿ
(ಕೊಹಿನೂರ ಹಸನಸಾಬ, 1894)
…….ಹೀಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಮೌಖಿಕ ಕಾವ್ಯ ಸೃಷ್ಟಿಯ ಸಂದರ್ಭವು ಜನಪದದ ನುಡಿ, ಪದ ಬಳಕೆ, ಜನಪದರ ಆಶಯದೊಂದಿಗೆ ಮೂಡಿ ಬಂದವು. ಒಬ್ಬೊಬ್ಬ ಪದಕಾರನು ತನ್ನ ರಾಚನಿಕ ವಿಶಿಷ್ಟತೆಯಿಂದ ಜಾನಪದ ಲೋಕವನ್ನು ಬೆಳೆಸಿದರು. ಉದ್ದಕ್ಕೂ ಬೆಳೆದು ಬಂದ ಈ ಪರಂಪರೆ ಆಧುನಿಕ ಕನ್ನಡ ಕಾವ್ಯ ರೂಪವನ್ನು ಯಾವ ಬಿಗುವು ಇಲ್ಲದೆ ಕಟ್ಟಿ ಕೊಟ್ಟಿತು. ಆಧುನಿಕ ಕಾವ್ಯ ಇಂಥ ರೂಪ ರಚನೆಗಳನ್ನೇ ಹೊತ್ತಕೊಂಡು ಮುದ್ರಣ ಸಂಸ್ಸøತಿಯಲ್ಲಿ ಒಡಮೂಡಿ ಬಂದವು.
[ ಪ್ರಬಂಧ ಸಿದ್ದಪಡಿಸುವ ಸಂದರ್ಭದಲ್ಲಿ ಡಾ.ಅಮರೇಶ ನುಗಡೋಣಿಯವರ ‘ನುಡಿವ ಬೆಡಗು’,ಡಾ,ಕೆ.ಸಿ.ಶಿವಾರೆಡ್ಡಿಯವರ ‘ಕನ್ನಡದ ಹಾಡು ಪಾಡು’, ಡಾ.ಬಸವರಾಜ ಸಬರದ ಅವರ ‘ಹೈದರಾಬಾದ ಕರ್ನಾಟಕದ ತತ್ತ್ವಪದಕಾರರು’ ಹಾಗೂ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರ ’ಶರೀಫ ಸಾಹೇಬರ ಗೀತೆಗಳು’ ಹಾಗೂ ನನ್ನ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ‘ ಕೃತಿಗಳ ನೆರವು ಪಡೆದಿದ್ದೇನೆ.-ಲೇಖಕ ]*
- ಡಾ.ಪ್ರಕಾಶ ಗ. ಖಾಡೆ
‘ಶ್ರೀಗುರು’ ,ಸರಸ್ವತಿ ಬಡಾವಣೆ,
ಸೆಕ್ಟರ್ ನಂ. 63, ನವನಗರ,
ಬಾಗಲಕೋಟ.
ಮೊ.9845500890.
ಕವಿತೆಗಳು :ವಿದ್ಯಾ ಕುಂದರಗಿ
ಬಯಲ ಬದುಕಿಗೆ ..............
ಬಾಗಿಲೇಕೆ? ಗೋಡೆ ಏಕೆ?
ಛತ್ತಛಾವಣಿ ಮುಚ್ಚು ಏಕೆ?
ಹೊಚ್ಚಲೇಕೇ? ಬಚ್ಚಲೇಕೇ?
ಮುಚ್ಚುಮರೆಯ ತೆರೆಯೇ ಇಲ್ಲ
ಬಯಲ ಆಲಯದಲ್ಲಿ
ಬದುಕು ಬಯಲಿನಂತಿರಲು.
ನಸುಕಿನಲೆದ್ದು ಹೊದ್ದ ಕಲತ್ತಲೆಯ ಕಣ್ಣು ಕಟ್ಟಿ
ಅದೇ ಕಂಟಿ,ಕಂದರ, ಹೆಬ್ಬಂಡೆಗಳಿಗೆ
ಮರೆ,ಆಸರೆಯ ಮೊರೆ.........
ಇಲ್ಲದಿರೆ ಕಾಯಬೇಕು ಕಾರಿರುಳ.
ಭೇದ,ಭವಣೆ,ಸ್ಥಾವರಗಳ ಬಹಿರ್ದೆಶೆ...
ಮೈ ಮನಸ್ಸು ನಿರುಮ್ಮಳ.
ಮತ್ತೇ ಬಟ್ಟೆ ಕಳಚಿ, ಭಾವ ತೊಳೆದು
ಶುದ್ಧಿ ಕೈಂಕರ್ಯದಲ್ಲಿ
ಕಣ್ಣು ಮುಚ್ಚೇ ಕಾರ್ಯವಾಸಿ
ಒಣ ರೊಟ್ಟಿ, ನೆನೆದ ಕಾಳಿಗೆ
ಸವಿ ತರುವ ಎಳೆಗಾಯಿ, ಚಿಗುರೆಲೆ,
ಮಣ್ಣಲ್ಲಿ ಮಣ್ಣಾಗುವ.
ಕೆಸರಲ್ಲಿ ತೇವವಾಗುವ
ಕೈಗಳಿಗಿಲ್ಲ ಮಡಿ,ಮುಚ್ಚಟೆಯ ಸೂತಕ
ತೆನೆಯುತ್ತ,ತೊನೆಯುತ್ತ
ಹಸಿರ ಮಡಿಲೊಳಗೆ
ರಾಶಿ,ರಾಶಿ ಸುರಿದ ಕಾಳು,
ಭೂಮಿಯೊಡಲ ಕಣಜದೊಳಗೆ
ಭದ್ರವಾದ ನಾಳೆ ಬೀಜ.
ಹೊದಿಕೆಯೊಳಗೆ ತಂಬೆರಲರ ಕಚಗುಳಿ
ಕಿಲಿಕಿಲಿಸುವ ಮಿಂಚುಳ್ಳಿ
ಕತ್ತಲೆಯ ಗರ್ಭದೊಳಗೆ
ಬೆಳಕ ಕಿಡಿಯ ಬಿತ್ತಿ
ಮರಿ ಹಾಕುತ್ತದೆ ಪ್ರಕೃತಿ
ಬಯಲ ಬದುಕ ಸಂತತಿ
- ವಿದ್ಯಾ ಕುಂದರಗಿ
ಬೆಳಕ ತರುವೆನೆಂದವಗೆ
ಕರಿಮುಗಿಲಿನ ಕೆಳಗೆ
ಬಿಳಿ ಹೆಣ್ಣಿನ ಅಳಲು
ಸಂಗ ನಿಂತೊಮ್ಮೆ ನೋಡು
ಅನುಭವಿಸು,ಅರ್ಥೈಸು
ಬೆಳಕ ತರುವೆನೆಂದು
ಸೂರ್ಯನ ಹಿಂದೆ ಓಡೋಡುವ
ನೀನು ಮುಟ್ಟಬಲ್ಲೆಯಾ
ಪಣತೊಟ್ಟು ನೀನಿಟ್ಟ ಗುರಿ.
ಸೂರ್ಯನಿಗೆ ಸಾವಿಲ್ಲ
ನಿನಗವನಷ್ಟು ಆಯುಷ್ಯವಿಲ್ಲ
ಕತ್ತಲಿಲ್ಲದಿರೆ
ಬೆಳಕಿಗೆ ಬದುಕಿಲ್ಲ
ಯೋಚಿಸು,ಮನಸಾರೆ
ಇಚ್ಛಿಸು ಒಂದೇ ಒಂದು ಸಾರಿ
ನೀನೆ ಇಚ್ಛಿಸು
ದೈವೇಚ್ಛೆಯಲ್ಲೇನಿದೆ?
ಹಣೆಬರಹ ಹಳಿದು
ಹರಣ ಮಾಡಬೇಡ ಕಾಲ
ಪುಟ್ಟ ಹಣತೆಯಾಗು ಸಾಕು
ದಟ್ಟ ಕತ್ತಲೆಯ ಈ ಬದುಕಿಗೆ.
- ವಿದ್ಯಾ.ಕುಂದರಗಿ.
ಶನಿವಾರ, ಮೇ 11, 2013
ಬುಧವಾರ, ಮೇ 8, 2013
ಕವಿತೆ :ನಾಗರಾಜ ಹರಪನಹಳ್ಳಿ.
ºÉƸÀ
PÀ«vÉ : ದೂರ ದೂರ ಬಂದಿದ್ದೇವೆ.
.
.....ನಾಗರಾಜ ಹರಪನಹಳ್ಳಿ,ಕಾರವಾರ
UÀÄr¸À®ÄPÁt¢gÀ¯ÉAzÀÄ
zÀÆgÀzÀÆgÀ
§A¢zÉÝêÉ
PÁ¯ÉƤUÀ¼À£ÀÄß
PÀnÖ ªÀĺÀ®ÄUÀ¼À£ÀÄß
gÀAUÀÄUÉƽ¹zÉÝêÉeÉÆvÉUÉ
¨ÉZÀÑ£ÉAiÀÄ
ºÁ¹UÉ ºÉÆA¢¹zÉÝêÉ
¤lÄÖ¹gÀÄ
ºÉÆgÀUÉ PÉý¸À¢gÀ¯ÉAzÀÄ
ºÀ¹zÀªÀgÀ
PÀ£À¸ÀÄ PÀ¢ÝzÉÝêÉ
PÁgÀt
ºÉƸÀ
PÀ£À¸ÀÄ ©Ã¼ÀÄwÛ®è
ºÀ¼É
PÀ¸À£ÀÄ ¸ÀPÁgÀUÉÆAr®è
ºÀ¹zÀªÀgÀÄ
PÀ£Àß ºÁPÀ¢gÀ¯ÉAzÀÄ
M¼ÀV£À
£ÀUÀßDVßPÁt¢gÀ¯ÉAzÀÄ
JvÀÛgÉvÀÛgÀzÀPÀA¥ËAqÀÄ
ºÁQzÉÝêÉ
ºÀ¹zÀ
ºÉÆmÉÖ ºÀgÀPÀÄ CAV
PÁt¨ÁgÀzÉAzÀÄ
§ºÀÄzÀÆgÀ
¸ÀèªÀÄÄä ¤«Äð¹zÉÝêÉ
ºÀ¹zÀªÀgÀ
DPÉÆæñÀPÀmÉÖAiÉÆqÉAiÀÄ ¨ÁgÀzÉAzÀÄ
zÉêÀgÀUÀÄrAiÀÄUÀAmÉ
ªÉƼÀV¹zÉÝêÉ
ªÀĹâ
ZÀZÀðUÀ¼À°è ¤vÀå ¥Áæyð¸ÀÄwÛzÉÝêÉ
ºÀ¹zÀªÀjUÉ
C£ÀßPÉÆqÀÄJAzÀ®è
£ÀªÀÄä
¸ÀA¥ÀvÀÄÛEªÀÄär¸À¯ÉAzÀÄ
ªÀÄ£ÀĵÀågÀ£ÉßÃPÀ¢ÝzÉÝêÉ
ªÀÄ£ÀĵÀåvÀéPÁt¢gÀ¯ÉAzÀÄ
eÁw
ªÀUÀðUÀ¼À ¨Éð ºÉuÉ¢zÉÝêÉ
eÉÆvÉUÉ
MA¢µÀÄÖ ¨ÉuÉÚAiÀÄ£ÀÄß
«zsÁ£À¸ËzsÀzÀvÀÄ¢UÉ
¸ÀªÀjzÉÝêÉ
PÁgÀt
PɼÀVgÀĪÀªÀgÀÄ
¨ÉuÉÚUÁVvÀªÀQ¸ÀÄvÀÛ°gÀ¯ÉAzÀÄ
ªÉÄïÉüÀ¯ÁUÀzÀªÀgÀÄ
PÀĽvÀÄPÉƼÀî¯ÉAzÀÄ
NqÀ¯ÁUÀzÀªÀgÀÄ
£ÀqÉzÁqÀ¯ÉAzÀÄ
.........
* £ÁUÀgÁeï
ºÀgÀ¥À£ÀºÀ½î .PÁgÀªÁgÀ
ಹನಿಗವಿತೆ :
ಕಂಡೆಯಾ ಇದು ಇಂಡಿಯಾ...
ಪಾಲಿಸುವವರಿಗೆ
ಏನೆಲ್ಲ ಕಾನೂನು..
ಧಿಕ್ಕರಿಸುವವಗೆ
ಆಗದು
ಏನೇನೂ !
ಬಿ.ಎ.ಹುಣಸೀಕಟ್ಟಿ
ಮಕ್ಕಳ ಸಾಹಿತ್ಯ ಮರು ಚಿಂತನೆ ರಾಜ್ಯ ಮಟ್ಟದ ಮಟ್ಟದ ಚಿಂತನಾ ಸಮಾವೇಶ ಸಮಾವೇಶ ಮೇ.16,ಧಾರವಾಡ
|
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)