ಸೋಮವಾರ, ಜುಲೈ 29, 2013

ಕವಿತೆ :ವಿದ್ಯಾ ಕುಂದರಗಿ

                                   ಭಾವಬದಲಿಸುವಹೊತ್ತು
 

                                       - ವಿದ್ಯಾ ಕುಂದರಗಿ
ಹಗಲು ಬೆಳಗನುಂಡು
ಇರುಳು ಮೋದವನುಂಡು
ಹುಣ್ಣಿಮೆಯಲಿ ತಿಂಗಳ ಕುಡಿದು
ಕಾರ್ಗತ್ತಲಲಿ ಅಂತರಾಳಕ್ಕಿಳಿದು
ಅರುಣನೊಂದಿಗೆ ಬೆಂದು
ವರುಣನೊಂದಿಗೆ ಚಿಗುರಿದರೂ 
ಬಿಸಿಲಿಗೆ ತಡವಿಲ್ಲದೆ ಧೂಳಾಗುವ
ಮಳೆಗೆ ತಡವಿಲ್ಲದೆ ರಾಡಿಗೊಳ್ಳುವ
ಇವಳಿಗೆ
ಬಿಸಿಲಿಗೆ ಪ್ರಾಣದುಸಿರಾಗುವ
ಮಳೆಗೆ ಹಚ್ಚಹಚ್ಚಡವಾಗುವ
ನಮ್ಯತೆ ಬೇರೆ

ಭೂರಮೆಯ ರಾಗಕ್ಕೆ
ಸೂರ್ಯನ ಪಲ್ಲವಿ
ಚಂದ್ರನ ಅನುಪಲ್ಲವಿ

19-07-2013 *