ಕಿರಸೂರ ಗಿರಿಯಪ್ಪ (ಗಿರೀಶ ಆಸಂಗಿ)
"ಕಣ್ಣೀರು ಎಷ್ಟೇ ಸುರಿದರು ಬತ್ತದ ಜಲ
ಮತ್ತೇ ಮತೇ ಸುರಿದು ದು:ಖದ ಆಪ್ತತೆಯೊಡನೆ ಸಮ್ಮಿಲನ"
2
ಅವಳೊಮ್ಮೆ ಮಿಂಚಿ ನಕ್ಕ ಕ್ಷಣ
ಹದವರಿತ ಮಣ್ಣು ಪಿಸುಗುಟ್ಟಿ ಮಕ್ಕಳ ಸಂತೈಸುವುದು"
3
"ನನ್ನ ಇತಿಮಿತಿಯೊಳಗೆ ಹೊರಳಾಡಿದ ಮಸಿ
ಒಂದೊಮ್ಮೆ ವ್ಯಾಪಿತಗೊಳ್ಳಲು ಪರದಾಡಿ ರಕ್ತ ಮಡುಗಟ್ಟಿ ನಿಂತಿತು"
4
"ಪುಸ್ತಕ ನಮ್ಮೆಲ್ಲರ ಜೀವಂತಿಕೆಯ ಮತ್ತೋಂದು ದನಿ
ಎಲ್ಲೊ ಗತಿಸಿಹೋಗುತ್ತಿರುವ ಅಮಾಯಕರ ಕೊರಳ ನೆರಳಂತೆ"
5
"ಕಾವ್ಯಕ್ಕೂ ಜೀವವಿದೆ ಎಂದು ಗೊತ್ತಾಗಿದ್ದು
ನನ್ನನೆ ಸಂತೈಸಿ ಬೆರಳಡಿಯಲಿ ವಶ್ವರೂಪ ಪಡೆದ ಮೇಲೆ"
6
"ಅವರು ರಸ್ತೆ ಬದಿ ತೊಟ್ಟಿಕ್ಕಿದ ರಕ್ತದ ಮೇಲೆ ನಡೆದಾಗ
ಗೂಡಿಸಲ ಕೂಗು ಕಾಂಕ್ರೀಟಾಗಿ ಪರಿವರ್ತನೆ"
ಧನ್ಯವಾದಗಳು ಸರ್,ಏನೂ ಸ್ವಾದನೂ ಇಲ್ಲದೇ ಕವಿತೆಗಳನ್ನು ಮುಚ್ಚಿಟ್ಟಾಗ ಮುಜಗರಗೊಂಡು ಹಾಗೆ ಯಾರಿಗೂ ತೋರಿಸದೇ ನನ್ನೊಳಗೆ ನಾನೇ ನಿರ್ಲೀಪ್ತಗೊಂಡಾಗ ಸರ್,ನೀವು ಅವುಗಳನ್ನು ಬಿಚ್ಚಿ ಕಾವ್ಯದ ಜೀವಂತಿಕೆಯ ಸ್ವರೂಪದ ಬಟ್ಟೆ ತೊಡಿಸಿ ,ಅರಿವಿನ ಕನಸು ಕಟ್ಟಿದ್ದೀರಿ.ನಿಮ್ಮೀ ಪ್ರೋತ್ಸಾಹದ ದೀಪ ಯಾವಾಗಲೂ ಬೆಂಗಾವಲಾಗಿರಲಿ.ನಮಸ್ಕಾರ್ ಸರ್.
ಪ್ರತ್ಯುತ್ತರಅಳಿಸಿ-ಕಿರಸೂರ ಗಿರಿಯಪ್ಪ.