ಮಂಗಳವಾರ, ಏಪ್ರಿಲ್ 30, 2013

ಪ್ರವೀಣಕುಮಾರ ದೈವಜ್ಞಾಚಾರ್ ಅವರ ಕವಿತೆಗಳು.

        ಕವನ ಸಿರಿ :


             

                      ಪ್ರವೀಣಕುಮಾರ ದೈವಜ್ಞಾಚಾರ್


ಅತ್ತೂ ಕರೆದು
ರಂಪ ಮಾಡುವ ಮಗುವೆ
ನಿನಗೇಕೆ ಹಿಡಿಯಲಾಗದ
ಬಣ್ಣದ ಚಿಟ್ಠೆಯ ಗೊಡವೆ
ನೀ
ಕೇಳುವಿಯಾದರೆ ನನ್ನ ಮೊರೆ
ನೋಡುತ್ತಿರು, ಹಾರಿಬಿಡುವೆ
ಚಿಟ್ಟೆಯಾಗಿ ನಿನ್ನ ಕಣ್ಣೆದುರೆ

******


ನೀ ನನ್ನೊಡನಿರಲು
ಮಾತನಾಡುತ್ತಲೇ ಇರಬೇಕೆಂಬ
ನಿಯಮವಿಲ್ಲ ಗೆಳತಿ,
ಸುಮ್ಮನಿದ್ದರೂ ಆದೀತು
ಮಾತು ಬರದ ಮಗುವಿನಂತೆ
*****


ಆಗಸಕ್ಕೆ ಕೈಚಾಚಿ

ತುದಿ ಬೆರಳಲ್ಲೆ ಕೂಡಿಸುವೆ
ಚುಕ್ಕೆಗಳನು

ಕೂಡದ ಸುಖಕ್ಕೆ
ಮನಸು ಹಲುಬುತ್ತದೆ

***

ಅಂಗೈಯಗಲ
ಹರಿವ ನೀರಿಗೆ
ಕೈಯೊಡ್ಡಿ ನಿಲುವೆ

ಬೆರಳ ಸಂದಿಯಲಿ
ತೂರಿ ಹೋಗುವಎಚ್ಚರಿಕೆ!

*****

ಕನಸಲ್ಲಿ ಬಂದವಳೆ
ಎದೆಯಲ್ಲಿ ನಿಂತವಳೆ
ನಿನಗೊಂದು ಮಾತು ಹೇಳುವುದಿದೆ

ಕನಸು ಹೃದಯಗಳೆರಡೂ
ನಿನ್ನವಲ್ಲ, ಇಲ್ಲಿ
ಅತಿಕ್ರಮಣ ನಿಷೇಧವಿದೆ!
-ಪ್ರವೀಣಕುಮಾರ ದೈವಜ್ಙಾಚಾರ್.

1 ಕಾಮೆಂಟ್‌:

  1. ಧನ್ಯವಾದಗಳು, ಪ್ರಕಟಣೆಗೆ..


    "ಅಂಗೈಯಗಲ
    ಹರಿವ ನೀರಿಗೆ
    ಕೈಯೊಡ್ಡಿ ನಿಲುವೆ

    ಬೆರಳ ಸಂದಿಯಲಿ
    ತೂರಿ ಹೋಗುವ ನೀರಿಗೆ
    ಒಳಗೊಳಗೆ ನಗುವೆ".. -ಎಂದಾಗಬೇಕಿತ್ತು.

    ಪ್ರತ್ಯುತ್ತರಅಳಿಸಿ